ನಾನು ಏನು ತಿನ್ನಬೇಕು, ತಿನ್ನಬಾರದು ಎಂದು ಹೇಳಲು ಅವರ್ಯಾರು?: ಸಿದ್ದರಾಮಯ್ಯ

298

ಪ್ರಜಾಸ್ತ್ರ ಸುದ್ದಿ

ಚಿಕ್ಕಬಳ್ಳಾಪುರ: ಮಾಂಸಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಬಿಜೆಪಿಯವರು ಆರೋಪಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಸಿದ್ದರಾಮಯ್ಯ, ನಾನು ಏನು ತಿನ್ನಬೇಕು, ಏನು ತಿನ್ನಬಾರದು ಎಂದು ಹೇಳಲು ಅವರ್ಯಾರು ಎಂದಿದ್ದಾರೆ. ಅಲ್ಲದೇ ನಾನು ಏನುಬೇಕಾದರೆ ತಿನ್ನುತ್ತೇನೆ. ಎಲ್ಲಿಗೆ ಬೇಕಾದರು ಹೋಗುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಮಾಂಸಹಾರದ ಊಟಕ್ಕೆ ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ ಸ್ಪಷ್ಟನೆ ನೀಡಿದ್ದು, ಮಡಿಕೇರಿ ಪ್ರವಾಸದ ವೇಳೆ ಸಿದ್ದರಾಮಯ್ಯನವರು ಮಾಂಸಹಾರ ಸೇವನೆ ಮಾಡಿಲ್ಲ. ಸಸ್ಯಹಾರ ಊಟ ಮಾಡಿದ್ದಾರೆ. ಅವರಿಗೆ ನಾನೇ ಊಟ ಬಡಿಸಿದ್ದೇನೆ. ಟೇಬಲ್ ಮಾಂಸಹಾರ, ಸಸ್ಯಹಾರ ಎರಡು ಇತ್ತು. ಅವರು ಮಾಂಸಹಾರ ಬೇಡ, ಅಕ್ಕಿ ರೊಟ್ಟಿ ತಿನ್ನುತ್ತೇನೆ ಎಂದು ಸಸ್ಯಹಾರ ಸೇವಿಸಿದ್ದಾರೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!