ಮುಖ್ಯ ಕಾರ್ಯದರ್ಶಿಯನ್ನು ದೆಹಲಿಗೆ ಕಳುಹಿಸಿಲ್ಲ: ಸಿಎಂ ಬ್ಯಾನರ್ಜಿ

345

ಪ್ರಜಾಸ್ತ್ರ ಸುದ್ದಿ

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರನ್ನ ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಂಡಿದೆ. ಆದ್ರೆ, ಅವರನ್ನು ಕೇಂದ್ರಕ್ಕೆ ಕಳುಹಿಸಿ ಕೊಡಲು ಆಗುವುದಿಲ್ಲವೆಂದು ಸಿಎಂ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದಾರೆ.

ಕೋವಿಡ್ 19ಗೆ ಸಂಬಂಧಿಸಿದಂತೆ ಅಲಪನ್ ಅವರ ಸೇವೆ ತುಂಬಾ ಅಗತ್ಯವಿದೆ. ಹೀಗಾಗಿ ಅವರನ್ನ ಕೇಂದ್ರಕ್ಕೆ ಕಳಿಸಲ್ಲವೆಂದು ಪತ್ರ ಬರೆದಿದ್ದಾರೆ. ಯಾಸ್ ಚಂಡಮಾರುತದ ಕುರಿತು ಪ್ರಧಾನಿ ಮೋದಿ ನಡೆಸಿದ ಸಭೆಗೆ ಸಿಎಂ ಮಮತಾ ಬ್ಯಾನರ್ಜಿ ಅರ್ಧ ಗಂಟೆ ತಡವಾಗಿ ಬಂದಿದ್ರು.

ಇನ್ನು ಮರುಪರಿಶೀಲನೆ ಸಭೆಗೆ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಗೈರಾಗಿದ್ರು. ಇದಾದ ಬಳಿಕ ಅವರನ್ನ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಮೇ 31ರಂದು ವರದಿ ಮಾಡಿಕೊಳ್ಳುವಂತೆ ಸೂಚಿಸಿದೆ. ಇದಕ್ಕೆ ಸಿಎಂ ಮಮತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!