ಸಿಂದಗಿ: ಇತ್ತೀಚೆಗೆ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿನ ಸವರ್ಣಿಯರು, ದಲಿತ ಕೇರಿಯನ್ನ ಪ್ರವೇಶಿಸಿ ಮಾರಕಾಸ್ತ್ರಗಳಿಂದ ಮಹಿಳೆಯರು, ಮಕ್ಕಳೆನ್ನದೆ ಎಲ್ಲರ ಮೇಲೆ ಹಲ್ಲೆ ಮಾಡಿರುವುದನ್ನ ಖಂಡಿಸಿ ಸಿಂದಗಿ ಬಂದ್ ಗೆ ಕರೆ ನೀಡಲಾಗಿದೆ.
ತಾಲೂಕಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ಅಕ್ಟೋಬರ್ 18ಕ್ಕೆ ಸಿಂದಗಿ ಬಂದ್ ಗೆ ಕರೆ ನೀಡಲಾಗಿದೆ. ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಅಕ್ಟೋಬರ್ 18ಕ್ಕೆ ಸಿಂದಗಿ ಬಂದ್ ಗೆ ಕರೆ ನೀಡಲಾಗಿದೆ ಅಂತಾ ತಿಳಿಸಿದ್ರು.
ಘಟನೆಯಲ್ಲಿ ದ್ವಂಸಗೊಳಿಸಿರುವ ಡಾ.ಅಂಬೇಡ್ಕರ್ ಅವರ ಮೂರ್ತಿಯನ್ನ, ತಾಲೂಕು ಆಡಳಿತ ಮರು ಸ್ಥಾಪಿಸಬೇಕು. ಪುತ್ಥಳಿ ದ್ವಂಸಗೊಳಿಸಿದ ದುಷ್ಕರ್ಮಿಗಳನ್ನ ಶೀಘ್ರವಾಗಿ ಬಂಧಿಸಬೇಕು. ಇದರ ಜೊತೆಗೆ ಕಕ್ಕಳಮೇಲಿ ಗ್ರಾಮದ ದಲಿತ ಸಮುದಾಯದವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಬಂದ್ ಗೆ ಕರೆ ನೀಡಲಾಗಿದೆ. ಈ ವೇಳೆ ವೈ.ಸಿ ಮಯೂರ, ಚಂದ್ರಕಾಂತ ಸಿಂಗೆ, ರಾಜು ಕೂಚಬಾಳ, ಬಸವರಾಜ ಇಂಗಳಗಿ, ಮಧುಸೂಧನ ಗುಲಬರ್ಗಾ, ರಾಜಶೇಖ ಹೊಸಮನಿ, ರಾಕೇಶ ಕಾಂಬಳೆ, ಮಹೇಶ ಕಟ್ಟಿಮನಿ, ಉಮೇಶ ದೊಡ್ಡಮನಿ ಸೇರಿದಂತೆ ಅನೇಕರು ಭಾಗಹಿಸಿದ್ರು.