ಸಿಂದಗಿ ಜಿಲ್ಲೆಗಾಗಿ ಹೋರಾಟ: ಅರುಣ ಶಹಾಪೂರ

509

ಸಿಂದಗಿ: ರಾಜ್ಯದಲ್ಲಿ ನೂತನ ಜಿಲ್ಲೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದು ವೇಳೆ ವಿಜಯಪುರವನ್ನ ವಿಭಜನೆ ಮಾಡಬೇಕು ಅನ್ನೋ ಪ್ರಸ್ತಾವನೆಯನ್ನ ಸಿಎಂ ಮಾಡಿದ್ರೆ, ಸಿಂದಗಿಯನ್ನ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಹೇಳಿದ್ರು.

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯಾಗಬೇಕಾದ ಅರ್ಹತೆ ಸಿಂದಗಿಗೆ ಇದೆ. 8-9 ತಾಲೂಕುಗಳಿರುವ ಮೈಸೂರು, ತುಮಕೂರು ಜಿಲ್ಲೆಯ ವಿಭಜನೆಗೆ ಕೂಗು ಕೇಳಿ ಬರ್ತಿದೆ. 13 ತಾಲೂಕುಗಳನ್ನ ಹೊಂದಿರುವ ವಿಜಯಪುರ ವಿಭಜನೆಗೆ ಮುಂದಾದ್ರೆ, ಸಿಂದಗಿ ಜಿಲ್ಲೆಗಾಗಿ ಪಕ್ಷಾತೀತವಾಗಿ ಗಟ್ಟಿಯಾದ ಧ್ವನಿಯನ್ನ ಎತ್ತುವ ಮೂಲಕ ಹೋರಾಟ ಮಾಡಲಾಗುತ್ತೆ. ಇಂಡಿಯಲ್ಲಿ ಉಪ ವಿಭಾಗೀಯ ಕಚೇರಿಯಿದ್ದು, ಅದನ್ನ ಅಲ್ಲಿಯೇ ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಸಿಂದಗಿಯಲ್ಲಿ ಜಿಲ್ಲಾ ಕಚೇರಿಗಳ ಸ್ಥಾಪನೆಗೆ ಹೋರಾಟ ಮಾಡಲಾಗುವುದು ಅಂತಾ ಹೇಳಿದ್ರು.

ಇದರ ಜೊತೆಗೆ ವಾಡಿ-ಶೇಡಬಾಳ ನಡುವೆ ರೈಲ್ವೆ ಸಂಪರ್ಕದ ಮೂಲಕ ಸಿಂದಗಿಗೆ ರೈಲು ಸಂಚಾರ ನಿರ್ಮಾಣಕ್ಕಾಗಿ ಸಂಸದ ರಮೇಶ ಜಿಗಜಿಣಗಿ ಅವರ ನೇತೃತ್ವದಲ್ಲಿ ರೈಲ್ವೆ ಸಚಿವರಾಗಿರುವ ಸುರೇಶ ಅಂಗಡಿಯವರಿಗೆ ಮನವಿ ಸಲ್ಲಿಸುವ ಕೆಲಸ ಮಾಡ್ತೀವಿ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!