ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕೃಷಿ ಮಸೋದೆ ವಿರೋಧಿಸಿ ರೈತರು ನಡೆಸ್ತಿರುವ ಬೃಹತ್ ಪ್ರತಿಭಟನೆಯನ್ನ ಪಂಜಾಬ್ ಮಾಜಿ ಸಿಎಂ ಪ್ರಕಾಶ ಸಿಂಗ್ ಬಾದಲ್ ಬೆಂಬಲಿಸಿದ್ದಾರೆ. ಹೋರಾಟಕ್ಕೆ ಬೆಂಬಲಿಸಿ ಪ್ರಶಸ್ತಿಯನ್ನ ವಾಪಸ್ ಮಾಡಿದ್ದಾರೆ.
ಅಕಾಲಿ ದಳದ ನಾಯಕ ಹಾಗೂ ಮಾಜಿ ಸಿಎಂ ಬಾದಲ್, ಕೇಂದ್ರ ಸರ್ಕಾರ ನೀಡಿರುವ ಪದ್ಮ ವಿಭೂಷಣ ಪ್ರಶಸ್ತಿಯನ್ನ ವಾಪಸ್ ಮಾಡಿದ್ದಾರೆ. ಮಾರ್ಚ್ 30, 2015ರಲ್ಲಿ ಮಾಜಿ ರಾಷ್ಟ್ರಪತಿ ದಿಂವಗತ ಪ್ರಣಬ್ ಮುಖರ್ಜಿ ಅವರ ಕೈಯಿಂದ ಪ್ರಶಸ್ತಿ ಪಡೆದಿದ್ದಾರೆ. ಅಕಾಲಿ ದಳಕ್ಕೆ ಬಿಜೆಪಿ ಹಿರಿಯ ಮಿತ್ರಪಕ್ಷವಾಗಿದ್ರೂ ರೈತರ ಭಾವನೆಗಳಿಗೆ ಬೆಲೆ ನೀಡುತ್ತಿಲ್ಲವೆಂದು ಹೇಳಿದ್ದಾರೆ.