ಸಂಸತ್ತಿನಲ್ಲಿ ಸ್ಮೋಕ್ ಬಾಂಬ್: ಬಾಗಲಕೋಟೆಯ ಟೆಕ್ಕಿ ಬಂಧನ

190

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ಸಂಸತ್ತಿನಲ್ಲಿ ಡಿಸೆಂಬರ್ 13ರಂದು ಇಬ್ಬರು ಸ್ಮೋಕ್ ಬಾಂಬ್ ದಾಳಿ ನಡೆಸಿ ಆತಂಕ ಸೃಷ್ಟಿಸಿದ ಘಟನೆ ಸಂಬಂಧ ಇದೀಗ ಬಾಗಲಕೋಟೆಯ ಟೆಕ್ಕಿಯ ಬಂಧನವಾಗಿದೆ.

ಬಂಧಿತ ಮನೋರಂಜನ್ ಸ್ನೇಹಿತ ಸಾಯಿಕೃಷ್ಣ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ನಿವೃತ್ತ ಡಿವೈಎಸ್ಪಿ ಪುತ್ರನಾಗಿದ್ದು, ಮನೋರಂಜನ್ ಡೈರಿಯಲ್ಲಿ ಈತನ ಹೆಸರು ಬರೆಯಲಾಗಿದೆ. ಬೆಂಗಳೂರಿನ ಬಿಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುವಾಗಿ ಇಬ್ಬರು ಸ್ನೇಹಿತರಾಗಿದ್ದರು.

ಬಂಧಿತ ಮೈಸೂರು ಮೂಲದ ಮನೋರಂಜನ್ ಡೈರಿಯಲ್ಲಿ ಸಾಯಿಕೃಷ್ಣ ಹೆಸರು ಬರೆಯಲಾಗಿದೆ. ಈ ಕಾರಣಕ್ಕೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!