ಬೆಂಗಳೂರು: ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ ಪಿಎ ರಮೇಶ ಆತ್ಮಹತ್ಯೆ ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿದೆ. ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ನೇಣಿಗೆ ಶರಣಾದ ರಮೇಶ ಬರೆದಿರುವ ಡೆತ್ ನೋಟ್ ಸಿಕ್ಕಿದೆ ಅಂತಾ ಹೇಳಲಾಗ್ತಿದೆ. ಐಟಿ ಅಧಿಕಾರಿಗಳ ವಿಚಾರಣೆ ಬಳಿಕ ಸಾಕಷ್ಟು ಹೆದರಿದ್ದ ರಮೇಶ, ಸ್ನೇಹಿತರಿಗೆ ಫೋನ್ ಮಾಡಿ ಸೂಸೈಡ್ ಬಗ್ಗೆ ಹೇಳಿಕೊಂಡಿದ್ದನಂತೆ.
ರಮೇಶ ಶ್ರೀಮಂತನಾ?
ರಾಮನಗರ ಜಿಲ್ಲೆಯ ಮೇಲೆಹಳ್ಳಿಯ ಸಂಪಂಗಯ್ಯ ಎಂಬುವರ ಮಗನಾಗಿರುವ ರಮೇಶ, ಕೆಪಿಸಿಸಿ ಕಚೇರಿಯಲ್ಲಿ ಬೆರಳಚ್ಚುಗಾರರಾಗಿ ಈ ಮೊದ್ಲು ಕೆಲಸ ಮಾಡ್ತಿದ್ರು. ಡಾ.ಜಿ ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರಾದ್ಮೇಲೆ ಅವರ ಆಪ್ತ ಸಹಾಯಕರಾದ್ರು. ಗೃಹ ಸಚಿವ, ಡಿಸಿಎಂ ಆಗಿದ್ದಾಗ್ಲೂ ಅವರ ಪಿಎ ಆಗಿದ್ರು. ಇಂಥಾ ರಮೇಶ ಸಹ ಶ್ರೀಮಂತ ಅಂತಾ ಹೇಳಲಾಗ್ತಿದೆ.
ಚನ್ನಪಟ್ಟಣದಲ್ಲಿ ರಮೇಶಗೆ ಸೇರಿದ ಮೂರು ಅಂತಸ್ತಿನ ಬಿಲ್ಡಿಂಗ್, ಬೆಂಗಳೂರಿನಲ್ಲಿ ಮನೆ ಹಾಗೂ ಪ್ರಮುಖ ಬಡಾವಣೆಗಳಲ್ಲಿ ನಾಲ್ಕು ಸೈಟ್ ಗಳನ್ನ ಹೊಂದಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಪರೇಶ್ವರ ಮನೆ ಮೇಲೆ ಐಟಿ ದಾಳಿ ನಡೆದ್ಮೇಲೆ ರಮೇಶ ಮನೆ ಮೇಲೆ ಐಟಿ ದಾಳಿ ನಡೆಸಿದಾಗ ಕೆಲ ಮಹತ್ವದ ದಾಖಲೆಗಳು ಸಿಕ್ಕಿವೆ ಅಂತಾ ಹೇಳಲಾಗ್ತಿದೆ.