ಪ್ರಯಾಣಿಕರ ಆರೋಗ್ಯದ ಮೇಲೆ ನಿಗಾ ವಹಿಸಲು ಆಗ್ರಹ

317

ಮಂಡ್ಯ: ವಾಣಿಜ್ಯ ನಗರಿ ಮುಂಬೈಗೆ ದಿನನಿತ್ಯ ಐದಾರು ಬಸ್ಸುಗಳ ಸಂಚಾರ ಮಾಡುತ್ತವೆ. ಈ ವೇಳೆ ಕರೋನಾ ಶಂಕಿತರು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರ್ತಿದ್ದಾರೆ ಅನ್ನೋ ಆತಂಕ ಜಿಲ್ಲೆಯ ಭಾಗದ ಜನರಲ್ಲಿ ಮೂಡಿದೆ. ಮಂಡ್ಯ, ಕೃಷ್ಣರಾಜಪೇಟೆ ಪಟ್ಟಣಕ್ಕೆ ಆಗಮಿಸುವ ಮುಂಬೈ ವಾಸಿಗಳನ್ನ ಪರೀಕ್ಷಿಸಿ ಆತಂಕ ದೂರಪಡಿಸಲು ಸಾರ್ವಜನಿಕರ ಆಗ್ರಹಿಸಿದ್ದಾರೆ.

ಕೆ.ಆರ್.ಪೇಟೆ-ಮುಂಬೈ ಹಾಗೂ ಮುಂಬೈ-ಕೆ.ಆರ್.ಪೇಟೆ ಪಟ್ಟಣಕ್ಕೆ ಐದಾರು ಖಾಸಗಿ ಬಸ್ಸುಗಳು ಸಂಚರಿಸುತ್ತಿವೆ. ಇವುಗಳಲ್ಲಿ 250ಕ್ಕೂ ಹೆಚ್ಚಿನ ಮುಂಬೈ ಕನ್ನಡಿಗರು ಆಗಮಿಸುತ್ತಿರುವುದರಿಂದ, ಈ ವ್ಯಕ್ತಿಗಳು ನೆರೆ ರಾಜ್ಯದವರಾಗಿದ್ದು ಕರೋನಾ ಸೋಂಕಿತರು ವಲಸೆ ಬರುವ ಸಾಧ್ಯತೆಗಳಿವೆ.

ಪಟ್ಟಣದಲ್ಲಿರುವ ವಿವಿಧ ಟ್ರಾವಲ್ ಬಸ್ ಗಳಲ್ಲಿ ಪ್ರಯಾಣಿಸುವವರನ್ನ ಪರೀಕ್ಷಿಸಬೇಕು. ಇದರ ಜೊತೆಗೆ ಆರೋಗ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ವಹಿಸಬೇಕು ಎಂದು ತಾಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತವನ್ನ ಆಗ್ರಹಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!