ಭೂಪಾಲ್: ಮಧ್ಯಪ್ರದೇಶ ಸಿಎಂ ಕಮಲನಾಥಗೆ ಕರೋನಾ ವೈರಸ್ ವರದಾನವಾಗಿದೆ. ಅದ್ಹೇಗೆ ಅಂತೀರಾ. ರಾಜ್ಯಪಾಲರ ಸೂಚನೆ ಮೇರೆಗೆ ಸ್ಪೀಕರ್ ಇಂದು ಬಹುಮತ ಸಾಬೀತು ಪ್ರಕ್ರಿಯೆ ನಡೆಸಬೇಕಿತ್ತು. ಆದ್ರೆ, ಕರೋನಾ ಭೀತಿ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಮಾರ್ಚ್ 26ಕ್ಕೆ ವಿಧಾನಸಭೆ ಅಧೀವೇಶನ ಮುಂದೂಡಿದ್ದಾರೆ.
ಕಮಲನಾಥ ನೇತೃತ್ವದ ಸರ್ಕಾರಕ್ಕೆ ಇದೀಗ 10 ದಿನಗಳ ರಿಲೀಫ್ ಸಿಕ್ಕಿದೆ. 22 ಜನ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ಇದು ಶಾಸಕರಿಗೆ ಒಂದಿಷ್ಟು ಶಾಕ್ ನೀಡಿದಂತಾಗಿದೆ. ಬಿಜೆಪಿ ಅವರು ನಮ್ಮ ಶಾಸಕರನ್ನ ಹಿಡಿದಿಟ್ಟುಕೊಂಡಿದ್ದಾರೆ. ನಿಯಮ ಹಾಗೂ ನಿಗದಿಯಂತೆ ನಾವು ವಿಧಾನಸಭೆ ಅಧಿವೇಶನ ನಡೆಸಲು ಸಿದ್ಧರಿದ್ದೇವೆ. ಆದ್ರೆ, ಬಿಜೆಪಿ ನಾಯಕರು ಬಹುಮತಕ್ಕೆ ಅಡ್ಡಿಪಡಿಸಲು ನೋಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಕಿಡಿ ಕಾರಿದ್ದಾರೆ.