ರಾಜ್ಯದಲ್ಲಿ ಸಂಪುಟ ಪುನರ್ ರಚನೆ ಪ್ಲಾನ್!

598

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಂದಿದ್ದು, ಇದು ರಾಜ್ಯ ರಾಜಕೀಯದ ಮೇಲೂ ಪರಿಣಾಮ ಬೀರಿದೆ. ಅದರಲ್ಲೂ ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಬಲ ಬಂದಿದ್ದು, ಇದರ ನಡುವೆ ಸಂಪುಟ ಪುನರ್ ರಚನೆಗೆ ಪ್ಲಾನ್ ನಡೆಯುತ್ತಿದೆಯಂತೆ.

ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಆಕಾಂಕ್ಷಿಗಳನ್ನು ಸೈಲೆಂಟ್ ಮಾಡಲಾಗಿತ್ತು. ಈಗ ಮತ್ತೆ ಗರಿಗೆದರಿವೆ. ಸಂಪುಟ ವಿಸ್ತರಣೆ ಮಾಡುವ ಬದಲು ಪುನರ್ ರಚನೆಗೆ ಮುಂದಾಗಿದೆಯಂತೆ. ಸಂಪುಟದಲ್ಲಿರುವ ಹಿರಿಯರು ಹಾಗೂ ಎರಡೆರಡು ಬಾರಿ ಸಚಿವರಾದವರನ್ನು ಕೈಬಿಡುವ ಚಿಂತನೆಯಿದೆಯಂತೆ.

ಈ ಹಿರಿಯರು, ಎರಡೆರಡು ಬಾರಿ ಸಚಿವರಾದವರನ್ನು ಕೈ ಬಿಡುವುದು ಅಷ್ಟೊಂದು ಸುಲಭವಲ್ಲ. ಪಕ್ಷದಲ್ಲಿ ತಮ್ಮದೆಯಾದ ಹಿಡಿತಹೊಂದಿರುವವರಿದ್ದು, ಜಾತಿ ಬಲ, ಹಣ ಬಲ ಸಹ ಜೋರಾಗಿದೆ. ಹೀಗಾಗಿ ಯಾರನ್ನು ಕೈ ಬಿಟ್ಟು ಯಾರಿಗೆ ಮಂತ್ರಿಗಿರಿ ನೀಡಲಾಗುತ್ತೆ ಅನ್ನೋ ಕುತೂಹಲವಿದೆ.




Leave a Reply

Your email address will not be published. Required fields are marked *

error: Content is protected !!