ಬೈಕಿಗೆ ಪೊಲೀಸ್ ವಾಹನ ಡಿಕ್ಕಿ: ಸವಾರ ಸಾವು

129

ಪ್ರಜಾಸ್ತ್ರ ಸುದ್ದಿ

ಮೈಸೂರು: ಪೊಲೀಸ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಂಜನಗೂಡು ಹತ್ತಿರ ನಡೆದಿದೆ. ಮುದ್ದಳ್ಳಿ ನಿವಾಸಿ ಅಭಿ(25) ಮೃತ ಯುವಕ ಎಂದು ಗುರುತಿಸಲಾಗಿದೆ.

ಎಚ್ ಕೆಎಚ್ ಕಾಲೋನಿಯ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಇದರಿಂದಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕ್ರಾಸ್ ಹತ್ತಿರ ಹಿಂದೆ ಅನೇಕ ಅಪಘಾತಗಳು ನಡೆದಿವೆ. ಇದರ ಕುರಿತು ದೂರು ನೀಡಿದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!