ಪ್ರಜಾಸ್ತ್ರ ಸುದ್ದಿ
ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಜೊತೆಗೆ ಮೆದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದಕ್ಕೆ ಚಿಕಿತ್ಸೆ ಮಾಡಲಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ಸಂಬಂಧ ಇವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಟ್ವೀಟ್ ಮಾಡಿದ್ದಾರೆ.
ಕಳೆದ ಬಾರಿಯ ಆಗಸ್ಟ್ 8, ನನ್ಗೆ ಅತ್ಯಂತ ಸಂತಸದ ದಿನ. ನನ್ನ ತಂದೆ ಭಾರತ ರತ್ನ ಸ್ವೀಕಾರ ಮಾಡಿದ್ರು. ಇದಾದ ಒಂದು ವರ್ಷಕ್ಕೆ ಅವರಿಗೆ ತೀವ್ರ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಖುಷಿನೆ ಇರಲಿ. ದುಃಖವೆ ಇರಲಿ. ನನ್ಗೆ ಸಹಿಸಿಕೊಳ್ಳುವ ಶಕ್ತಿ ಕೊಡು ಎಂದು ಟ್ವೀಟ್ ಮಾಡಿದ್ದಾರೆ.
ದುಃಖವೆ ಇರಲಿ ಅನ್ನೋ ಮಾತನ್ನ ಯಾಕೆ ಹೇಳಿದ್ರು ಅನ್ನೋ ಪ್ರಶ್ನೆ ಮೂಡಿದೆ. 84 ವರ್ಷದ ಪ್ರಣವ್ ಮುಖರ್ಜಿ ಅವರ ಬಗ್ಗೆ ವೈದ್ಯರ ತಂಡ ಕಹಿ ಸುದ್ದಿಯೇನಾದ್ರೂ ನೀಡ್ತಾರಾ ಅನ್ನೋ ಅನುಮಾನ ಮೂಡುವಂತಿದೆ ಅವರ ಪುತ್ರಿಯ ಟ್ವೀಟ್. ಇದೇನೆ ಇರಲಿ ಮುಖರ್ಜಿ ಅವರು ಗುಣಮುಖರಾಗಲಿ ಅನ್ನೋದು ಎಲ್ಲರ ಹಾರೈಕೆ