ಪ್ರಜಾಸ್ತ್ರ ಸುದ್ದಿ
ಮೈಸೂರು: ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುಂಚೆ ಪ್ರಿ ವೆಡ್ಡಿಂಗ್ ಫೋಟೋಶೂಟ್ ನಡೆಸುವುದು ಕಾಮನ್ ಆಗಿದೆ. ಕೆಲವರಂತೂ ಅತಿಯಾಗಿ ವರ್ತಿಸಿರುವುದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದರ ನಡುವೆ ಮೈಸೂರಿನಲ್ಲಿ ಜೋಡಿವೊಂದು ಸಾವನ್ನಪ್ಪಿರುವ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.
ನವೆಂಬರ್ 9ರಂದು ತಲಕಾಡಿನ ಕಾವೇರಿ ನದಿಯಲ್ಲಿ ಕ್ಯಾತಮಾರನಹಳ್ಳಿಯ ಚಂದ್ರು(28) ಹಾಗೂ ಶಶಿಕಲಾ(20) ಜೋಡಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ನಡೆಸುವ ಸಂದರ್ಭದಲ್ಲಿ ತೆಪ್ಪ ಮಗುಚಿಬಿದ್ದು ಸಾವನ್ನಪ್ಪಿದ್ರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಟೋಗ್ರಾಫರ್ ನಿಖಿಲ, ತೆಪ್ಪ ನೀಡಿದ ಮೂಗಪ್ಪ ಸೇರಿ 6 ಜನರ ವಿರುದ್ಧ ಕೇಸ್ ದಾಖಲಾಗಿದೆ.
ನದಿಯಲ್ಲಿ ಫೋಟೋಶೂಟ್ ಮಾಡುವ ಸಂದರ್ಭದಲ್ಲಿ ಲೈಫ್ ಜಾಕೆಟ್ ಬಳಕೆ ಮಾಡಿರ್ಲಿಲ್ಲ. ಸುರಕ್ಷತೆಯ ಬಗ್ಗೆಯೂ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸಿರಲಿಲ್ಲ. ಅಸುರಕ್ಷತೆಯಿಂದ ಫೋಟೋಶೂಟ್ ನಡೆಸಿದ ಪರಿಣಾಮ, ಮದುವೆ ಮಾಡಿಕೊಂಡು ಹೊಸ ಜೀವನ ಶುರು ಮಾಡಬೇಕಿದ್ದ ಜೋಡಿ ಮಸಣ ಸೇರಿತು.