ಪ್ರಜಾಸ್ತ್ರ ಸುದ್ದಿ
ಮಲಪ್ಪುರಂ: ಮನುಷ್ಯ ಕೆಲವೊಮ್ಮೆ ಎಷ್ಟೊಂದು ಕ್ರೂರಿ. ಆತನೊಳಗೆ ಯಾವ ಮಟ್ಟದಲ್ಲಿ ರಾಕ್ಷಸಿಯ ಗುಣ ಅಡಗಿರುತ್ತೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಉತ್ತರ ಕೇರಳದ ಮಲಪ್ಪುರಂ ಎಂಬಲ್ಲಿ ಹೆಣ್ಣಾನೆಯೊಂದು ಆಹಾರ ಅರಸಿ ಹಳ್ಳಿಗೆ ಬಂದಿದೆ. ಅಲ್ಲಿಯೇ ಸುಳಿದಾಡಿದೆ.
ಬಳಿಕ ಕೆಲವರು ಅದಕ್ಕೆ ಪೈನಾಪಲ್ ಕೊಟ್ಟಿದ್ದಾರೆ. ಹಾಗೇ ಕೊಟ್ಟವರ ನೀಚತನ ಅದಕ್ಕೇನು ಗೊತ್ತಾಗಬೇಕು ಹೇಳಿ. ಮೊದ್ಲೇ ಹಸಿದಿದೆ. ಹೊಟ್ಟೆಯೊಳಗೆ ಮರಿಯೊಂದು ಇದೆ. ಹೀಗಾಗಿ ಆನೆ ಪೈನಾಪಲ್ ತಿಂದಿದೆ. ಆದ್ರೆ, ಹಣ್ಣಿನೊಳಗೆ ಪಟಾಕಿ ರೀತಿಯ ಸ್ಫೋಟಕ ಇದ್ದಾರೆ. ಪೈನಾಪಲ್ ತಿನ್ನುತ್ತಿದ್ದಂತೆ ಸ್ಫೋಟಗೊಂಡಿದೆ. ಆಗ ಅದರ ಬಾಯಿ ಸಂಪೂರ್ಣವಾಗಿ ಗಾಯಗೊಂಡಿದೆ. ಊರೆಲ್ಲ ನರಳುತ್ತಾ ತಿರುಗಾಡಿದೆ. ಈ ವೇಳೆಯೂ ಅದು ಯಾರಿಗೂ ಏನೂ ಮಾಡಿಲ್ಲ.
ನಂತರ ಅದು ಒಂದು ಹೊಳೆಗೆ ಹೋಗಿ ನೀರಲ್ಲಿ ಸೊಂಡಲಿಟ್ಟು ನಿಂತಿದೆ. ಅದು ಹೇಗೆ ನಿಂತಿದೆಯೋ ಅದೇ ಸ್ಥಿತಿಯಲ್ಲಿ ಕೊನೆಯುಸಿರೆಳೆದಿದೆ. ಕೆಲವು ಮನುಷ್ಯರು ಎಷ್ಟೊಂದು ಕ್ರೂರಿಗಳು. ಆ ಆನೆ ಎಷ್ಟೊಂದು ಒಳ್ಳೆಯದಾಗಿತ್ತು. ತನ್ನ ನೋವಿನಲ್ಲೂ ಯಾರಿಗೂ ಹಾನಿ ಮಾಡಿಲ್ಲವೆಂದು ಎಂದು ಅರಣ್ಯಾಧಿಕಾರಿ ಕೃಷ್ಣ ಮೆನನ್ ಬರೆದಿದ್ದಾರೆ. ಬಳಿಕ ಅದನ್ನ ಇನ್ನೆರಡು ಆನೆಗಳ ಮೂಲಕ ಹೊರಕ್ಕೆ ತೆಗೆದು ಅಂತಿಮ ಸಂಸ್ಕಾರ ಮಾಡಿ ಗೌರವ ಸಲ್ಲಿಸಲಾಗಿದೆ.
ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮನುಷ್ಯತ್ವ ಮರೆತು ವರ್ತಿಸಿದ ದುರುಳರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬಗ್ಗೆ ಮನಮಿಡಿಯುವ ಕಾರ್ಟೂನ್ ಮೂಲಕ ಆನೆ ಸಾವಿಗೆ ಕಂಬನಿ ಮಿಡಿಯಲಾಗಿದೆ.