ಪ್ರಜಾಸ್ತ್ರ ಸುದ್ದಿ
ನವದೆಹಲಿ: ಅಗ್ನಿವೀರರು ನಿವೃತ್ತಿ ಬಳಿಕ ಬಿಜೆಪಿ ಕಚೇರಿ ಸೆಕ್ಯೂರಿಟಿ ಗಾರ್ಡ್ ಆಗಲು ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ್ ಹೇಳಿದ್ದಾರೆ. ಈ ವಿವಾದಾತ್ಮಕ ಹೇಳಿಕೆಗೆ ಎಲ್ಲಡೆಯಿಂದ ಆಕ್ರೋಶ ವ್ಯಕ್ತವಾಗಿದೆ.
ಅಗ್ನಿವೀರರನ್ನು ನಾನು ಬಿಜೆಪಿ ಕಚೇರಿಯಲ್ಲಿ ಭದ್ರತೆಗಾಗಿ ನೇಮಿಸಿಕೊಳ್ಳಲು ಆದ್ಯತೆ ನೀಡುತ್ತೇನೆ. ನನ್ನ ಸ್ನೇಹಿತರೊಬ್ಬರು ನಿವೃತ್ತ ಸೇನಾ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ. ಸೈನಿಕನೆಂದರೆ ಆತ್ಮಸ್ಥೈರ್ಯ ಎಂದು ಹೇಳಿದ್ದಾರೆ.
ಅವರು ತರಬೇತಿಯಲ್ಲಿ ಕೌಶಲ್ಯ ಪಡೆದಿರುತ್ತಾರೆ. ಅವರ ಕೆಲಸಕ್ಕೆ ಅವರು ಬದ್ಧರಾಗಿರುತ್ತಾರೆ. ಅಲ್ಲಿ ಕಲಿತಿರುವುದನ್ನು ಅವರು ನಿವೃತ್ತಿ ನಂತರ ಉಪಯೋಗಿಸಿಕೊಳ್ಳಬಹುದು ಎಂದಿದ್ದಾರೆ. ಕೈಲಾಶ್ ವಿಜಯವರ್ಗೀಸ್ ಹೇಳಿಕೆಗೆ ವ್ಯಾಪಾಕ ಖಂಡನೆ ವ್ಯಕ್ತವಾಗಿದೆ. ಬಿಜೆಪಿ ಕಚೇರಿಯ ಸೆಕ್ಯೂರಿ ಗಾರ್ಡ್ ಮಾಡಿಕೊಳ್ಳಲು ಅಗ್ನಿವೀರರ ಹೆಸರಿನಲ್ಲಿ ಅರೆಕಾಲಿಕ ಸೇನಾ ವೃತ್ತಿ ನೀಡಲಾಗುತ್ತಿದೆ. ಅವರ ಶೈಕ್ಷಣಿಕ ಬದುಕು ಕಸಿದುಕೊಂಡು ತಮ್ಮ ಜೀತದಾಳುಗಳ ರೀತಿ ಮಾಡಿಕೊಳ್ಳಲಾಗುತ್ತೆ ಎಂದು ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ.