ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ, ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಅಹಿಂಸಾ ಪರವಾಗಿ ದಲಿತಪರ ಸಂಘಟನೆಗಳು ನಿಂತುಕೊಂಡಿವೆ. ಕಾಂತಾರ ಚಿತ್ರದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿಕೆ ವಿಚಾರ ಸಂಬಂಧ ಮಾತನಾಡಿರುವ ನಟ ಚೇತನಗೆ ಬೆದರಿಕೆಗಳು ಕೇಳಿ ಬಂದಿವೆ.
ಹಿಂದೂಪರ ಸಂಘಟನೆಗಳು ಅವರ ಮನೆ ಎದುರು ಗಲಾಟೆ ಮಾಡಿದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸಿವೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹಲವು ದಲಿತಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಅವರ ಮನೆಗೆ ಭೇಟಿ ನೀಡಿ ಅವರ ಬೆಂಬಲಕ್ಕೆ ನಿಂತಿದ್ದಾರೆ.
ನಟ ಚೇತನ್ ಅವರು ಸತ್ಯ ಹೇಳಿದ್ದಾರೆ. ದಲಿತ, ಬುಡಕಟ್ಟು, ಹಿಂದುಳಿದವರ ಸಂಪ್ರದಾಯ ಆಚರಣೆಗಳೆಂದು ಹೇಳುವ ಮೂಲಕ ಮೂಲ ನಿವಾಸಿಗಳನ್ನು ತುಳಿಯಲಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಿರುವ ಚೇತನ್ ಅವರನ್ನು ಮುಟ್ಟುವುದಕ್ಕೂ ಮೊದಲು ನಮ್ಮನ್ನು ದಾಟಿಕೊಂಡು ಹೋಗಿ ಎಂದು ದಲಿತಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.