Search

ಆಂಜನೇಯ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುವ ಪೂಜಾರಿ

176

ಪ್ರಜಾಸ್ತ್ರ ಸುದ್ದಿ

ದಾವಣಗೆರೆ: ಅಸಂಖ್ಯಾತ ಜನರು ಆರಾಧಿಸುವ ಆಂಜನೇಯನ ತಲೆ ಮೇಲೆಯೇ ಕಾಲಿಟ್ಟು ಪೂಜಾರಿಯೊಬ್ಬ ಪೂಜೆ ಮಾಡುವ ವಿಚಿತ್ರ ವರ್ತನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಒಬ್ಬ ಪೂಜಾರಿ ಕಾಲಿಟ್ಟಿದ್ದರೆ ಇನ್ನೊಬ್ಬ ಪೂಜಾರಿ ಅವನ ಕಾಲಿನ ಮೂಲಕ ಮೂರ್ತಿಗೆ ನೀರು ಹಾಕುತ್ತಾನೆ.

ಅಷ್ಟಕ್ಕೂ ಈ ಅವಮಾನಕಾರಿ ಹಾಗೂ ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆ ಮಾಡಿರುವ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆ ಹೊನ್ನಳ್ಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ. ಬಿಜೆಪಿಯ ಎಂ.ಪಿ ರೇಣುಕಾಚಾರ್ಯ ಅವರು ಈ ಕ್ಷೇತ್ರದ ಶಾಸಕರು. ಇಲ್ಲಿ ಹೀಗೆ ನಡೆದಿರುವುದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಹಿಂದೂ ಧರ್ಮದ ಹೆಸರಿನಲ್ಲಿ ದಲಿತರನ್ನು, ಹಿಂದುಳಿದವರನ್ನು ದೇವಸ್ಥಾನದೊಳಗೆ ಬಿಡದವರು, ಅಲ್ಪಸಂಖ್ಯಾತರ ಮೇಲೆ ಸದಾ ವಾಗ್ದಾಳಿ ನಡೆಸುವವರು ಇದನ್ನು ನೋಡಿ ಹೇಗೆ ಸುಮ್ಮನೆ ಕುಳಿತಿದ್ದಾರೆ. ದೇವರ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡುವವರು ಎಂದು ಟ್ವೀಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಟೀಕಾಸ್ತ್ರಗಳ ಪ್ರಯೋಗ ಜೋರಾಗಿದೆ.




Leave a Reply

Your email address will not be published. Required fields are marked *

error: Content is protected !!