ಬೆಂಗಳೂರು: ಪಿಎಸ್ಐ ಒಬ್ಬರ ಮಾನವೀಯತೆ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಶವಸಂಸ್ಕಾರಕ್ಕೆ ಹಣವಿಲ್ಲದೆ ಕಣ್ಣೀರು ಹಾಕ್ತಿದ್ದ ಭಿಕ್ಷುಕನ ಕುಟುಂಬಕ್ಕೆ ಪಿಎಸ್ಐ ಲಕ್ಷ್ಮೀನಾರಾಯಣ ಸಹಾಯ ಮಾಡಿದ್ದಾರೆ.
ನಂದಗುಡಿಯ ಬಸ್ ನಿಲ್ದಾಣ ಬಳಿ ತಿರಮಲೇಶ ಅನ್ನೋ ಭಿಕ್ಷುಕ ಸೆಪ್ಟೆಂಬರ್ 16ರಂದು ತೀರಿಕೊಂಡಿದ್ದ. ಆತನ ಶವಸಂಸ್ಕಾರ ಮಾಡಲು ಹಣವಿಲ್ಲದೆ ಆತನ ಕುಟುಂಬ ಕಣ್ಣೀರು ಹಾಕ್ತಿತ್ತು. ಈ ವೇಳೆ ಬಸ್ ನಿಲ್ದಾಣಕ್ಕೆ ಬಂದು ಮಾಹಿತಿ ಪಡೆದ ಪಿಎಸ್ಐ ಲಕ್ಷ್ಮೀನಾರಾಯಣ, ಶವಸಂಸ್ಕಾರಕ್ಕೆ 25 ಸಾವಿರ ರೂಪಾಯಿ ಹಣ ಸಂಗ್ರಹಿಸಿ ಅಂತಿಮ ಕಾರ್ಯ ಮುಗಿಸಿದ್ದಾರೆ. ನಂದಗುಡಿ ಠಾಣೆ ಪಿಎಸ್ಐ ಅವರ ಕಾರ್ಯ ತಿಳಿದ ಜನ ಮೆಚ್ಚುಗೆಯ ಮಾತುಗಳನ್ನ ಆಡ್ತಿದ್ದಾರೆ.