ಪ್ರಜಾಸ್ತ್ರ ಸುದ್ದಿ
ಹೊಸಪೇಟೆ: ಇಂದು ಪಿಯುಸಿ ಫಲಿತಾಂಶ ಬಂದಿದ್ದು, ಫೇಲ್ ಆದ ವಿದ್ಯಾರ್ಥಿಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಹೊಸಪೇಟೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸೂಸೈಡ್ ಮಾಡಲು ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರೂಪಾ ಹಾಗೂ ಶ್ರೇಯಾ ಅನ್ನೋ ವಿದ್ಯಾರ್ಥಿನಿಯರು ಚಲಿಸ್ತಿದ್ದ ರೈಲಿನ ಕೆಳಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ದಾವಣಗೆರೆಯಲ್ಲಿ ಜಯರಾಮ ಅನ್ನೋ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೀಗೆ ರಾಜ್ಯದ ಕೆಲವು ಕಡೆ ವಿದ್ಯಾರ್ಥಿಗಳು ದುಡುಕಿನ ನಿರ್ಧಾರ ಕೈಗೊಂಡಿರುವ ಘಟನೆಗಳು ನಡೆದಿವೆ. ಫಾಸ್, ಫೇಲ್ ಅನ್ನೋದರ ಮೇಲೆ ಜೀವನ ನಿರ್ಧಾರವಲ್ಲ ಅನ್ನೋದು ಅರೆಯದೆ ಹೋಗುವುದ್ರಿಂದ ಇಂಥಹ ಅನಾಹುತಗಳು ಸಂಭವಿಸ್ತಿವೆ.