ಭೀಮಾನದಿ ಪ್ರವಾಹ ಮುನ್ನೆಚ್ಚರಿಕೆ: ನೋಡಲ್ ಅಧಿಕಾರಿಗಳ ನೇಮಕ

337

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಭೀಮಾನದಿ ಪ್ರವಾಹದ ಮುನ್ನೆಚ್ಚರಿಕೆ ಕುರಿತು, ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಲಾಯ್ತು. ಈ ವೇಳೆ ಪ್ರವಾಹದ ಮುನ್ನೆಚ್ಚೆರಿಕೆ ಕುರಿತು ಹಲವು ವಿಚಾರಗಳನ್ನ ಚರ್ಚಿಸಲಾಗಿದೆ.

ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಎಸಿ ಸ್ನೇಹಲ ಲೋಖಂಡೆ ಅವರು, ಈ ವೇಳೆ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನ ನೇಮಿಸಿದ್ದಾರೆ. ತಾರಾಪೂರ-ಇರ್ಷಾದ ನೇವರ, ಬ್ಯಾಡಗಿಹಾಳ-ಆಂಜನೇಯ, ದೇವಣಗಾಂವ-ಸಿಂಗೆಗೋಳ, ಕುಮಸಗಿ-ಬಸವರಾಜ ಜೀಗಳೂರ, ಬಗಲೂರ-ಎಸ್.ಕೆ ಅವಟಿ, ತಾವರಖೇಡ-ಎಸ್.ಎಸ್ ನಗನೂರ, ಕಡ್ಲೇವಾಡ ಪಿ.ಎ ಅಮೋಗಿ ಹಿರೇಕುರುಬರ, ಶಂಬೇವಾಡ- ಐ.ಎ ಔರಂಗಬಾದ ಅವರನ್ನ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಈ ವೇಳೆ ತಹಶೀಲ್ದಾರ್ ಸಂಜೀವಕುಮಾರ ದಾಸರ, ಶಿರಸ್ತೇದಾರ ಸುರೇಶ ಮ್ಯಾಗೇರಿ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!