ರಾಯಚೂರು ಕಲುಷಿತ ನೀರು ಪ್ರಕರಣ, ಸತ್ಯ ಬಯಲು

307

ಪ್ರಜಾಸ್ತ್ರ ಸುದ್ದಿ

ರಾಯಚೂರು: ಕಲುಷಿತ ನೀರು ಕುಡಿದು ಮೂವರು ಸಾವನ್ನಪ್ಪಿದ್ದು, ಹಲವರು ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ನಗರಾದ್ಯಂತ ಕುಡಿಯುವ ನೀರಿನ ಪೂರೈಕೆಯ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.

ಡಿಸ್ಟ್ರಿಬ್ಯೂಷನ್ ಪಾಯಿಂಟ್, ಬಲ್ಕ್, ಸಪ್ಲೈ ಸೇರಿದಂತೆ ವಿವಿಧ ಹಂತಗಳಿಂದ 110 ಕಡೆ ಸ್ಯಾಂಪಲ್ಸ್ ಕಲೆ ಹಾಕಿ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 24 ಸ್ಯಾಂಪಲ್ ಗಳು ಕುಡಿಯಲು ಯೋಗ್ಯವಲ್ಲದ್ದು ಎಂದು ತಜ್ಞರು ವರದಿ ನೀಡಿದ್ದಾರೆ.

ಉಳಿದಂತೆ ಅನೇಕ ಕಡೆ ನೀರು ಕಲುಷಿತಗೊಂಡಿರುವುದು ತಿಳಿದು ಬಂದಿದೆ. ಇಂತಹ ನೀರು ಕುಡಿದ ಜನರ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತಿರುವುದು ವರದಿಯಾಗುತ್ತಿವೆ.




Leave a Reply

Your email address will not be published. Required fields are marked *

error: Content is protected !!