ಅಥಣಿ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದ್ರಾಕ್ಷಿ ಬೆಳೆಗಾರರಿಗೆ ಇದೀಗ ವರುಣನ ಕಾಟ ಶುರುವಾಗಿದೆ. ಇದ್ರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೇಸಿಗೆಯಲ್ಲಿ ಮಳೆ ಬರ್ತಿದ್ದು ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗ್ತಿದೆ.
ಅಥಣಿ ಭಾಗದ ಕೆಲವೆಡೆ ಈಗ ಮಳೆರಾಯನ ಅಬ್ಬರ ಶುರುವಾಗಿದೆ. ಹೀಗಾಗಿ ದ್ರಾಕ್ಷಿ ಬೆಳೆಯು ಕಟಾವಿಗೆ ಬಂದಿದ್ದು, ಈಗ ಮಳೆಯಾದ್ರೆ ಅದು ಸಂಪೂರ್ಣವಾಗಿ ನಾಶವಾಗಿ ಹೋಗಲಿದೆ. ಈಗಾಗ್ಲೇ ಜನರು ಕರೋನಾ ವೈರಸ್ ನಿಂದ ಹೈರಾಣಾಗಿ ಹೋಗಿದ್ದಾರೆ. ರೈತರ ಬದುಕಿನ ಮೇಲೂ ಇದು ಪರಿಣಾಮ ಬೀರಿದೆ. ಇದೀಗ ಮತ್ತೆ ಮಳೆಯಾದ್ರೆ ದ್ರಾಕ್ಷಿ ಸಂಪೂರ್ಣ ಮಣ್ಣುಪಾಲಾಗುತ್ತೆ. ಹೀಗಾಗಿ ರೈತರಲ್ಲಿ ಸಂಕಷ್ಟ ಮನೆ ಮಾಡಿದೆ.