ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ತಡರಾತ್ರಿ ಅಕಾಲಿಕ ಮಳೆಯಾಗಿದೆ. ರಾತ್ರಿ ಸುಮಾರು 12.30ರಿಂದ ಭರ್ಜರಿಯಾಗಿ ಮಳೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಸಾಧಾರಣ ಮಳೆಯಾಗಿತ್ತು. ಆದರೆ, ಕಳೆದ ರಾತ್ರಿ ಭಾರೀ ಮಳೆಯಾಗಿದೆ.
ಅಕಾಲಿಕ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿಂಬೆ, ಬಾಳೆ ಬೆಳೆಗಳು ಹಾಳುಗುತ್ತಿವೆ. ಇನ್ನೊಂದು ಕಡೆ ಬೇಸಿಗೆ ಬಿಸಿಲಿನಿಂದ ಹೈರಾಣಾಗಿ ಹೋಗಿರುವ ಜನಕ್ಕೆ ಭೂಮಿ ಒಂದಿಷ್ಟು ತಂಪಾದರೆ ತಾಪ ಕಡಿಮೆಯಾಗಬಹುದು ಎಂದುಕೊಳ್ಳುತ್ತಿದ್ದಾರೆ.