ವೀಕೆಂಡ್ ವಿಥ್ ರಮೇಶ ಕಾರ್ಯಕ್ರಮದಲ್ಲಿ ಹಿರಿಯ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಂದಿದ್ದಾರೆ. ಸಾಧಕರ ಸೀಟ್ ನಲ್ಲಿರುವ ಇವರು, ಹಲವಾರು ಹಿಟ್ ಸಿನಿಮಾಗಳನ್ನ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜೇಂದ್ರ ಸಿಂಗ್ ಬಾಬು ಅವರು ಬಂದಿದ್ದು ಅವರ ಅಭಿಮಾನಿಗಳಿಗೆ ಖುಷಿಯಾಗಿದೆ.
ಸ್ಯಾಂಡಲ್ ವುಡ್ ನಲ್ಲಿ ಇವರಿಗೆ ದೊಡ್ಡ ಹೆಸರಿದೆ. ಮುತ್ತಿನ ಹಾರ, ದೋಣಿ ಸಾಗಲಿ, ಮಹಾ ಕ್ಷತ್ರಿಯ, ಕರ್ಣ, ಬಣ್ಣದ ಗೆಜ್ಜೆ, ಕೋತಿಗಳು ಸರ್ ಕೋತಿಗಳು, ಹೂವು ಹಣ್ಣು ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿದ್ದಾರೆ. ವಿಷ್ಣು ಹಾಗೂ ಅಂಬಿ ಗೆಳೆಯರ ಬಳಗದ ಕೇಂದ್ರ ಬಿಂದು ಇವರು. ಈ ಮೂವರು ನಡುವಿನ ಸ್ನೇಹಕ್ಕೆ ದೊಡ್ಡ ಕಥೆಯಿದೆ.