ರಜಿನಿ ವಿರುದ್ಧ ಹೈಕೋರ್ಟ್ ಗರಂ

291

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಮಿಳು ಸೂಪರ್ ಸ್ಟಾರ್ ರಜಿನಿಕಾಂತ ವಿರುದ್ಧ ಮದ್ರಾಸ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಅವರು ಸಲ್ಲಿಸಿದ ಅರ್ಜಿಯನ್ನ ವಾಪಸ್ ಪಡೆಯುವಂತೆ ಸೂಚಿಸಿದೆ. ತಮಿಳುನಾಡಿನ ಕೊಡಂಬಕ್ಕಂನಲ್ಲಿ ರಜಿನಿಗೆ ಸೇರಿದ ರಾಘವೇಂದ್ರ ಕಲ್ಯಾಣ ಮಂಟಪ ಇದೆ. ಇದರ ಅರ್ಧ ವಾರ್ಷಿಕ ತೆರಿಗೆ ಕಟ್ಟುವಂತೆ ಚೆನ್ನೈ ಕಾರ್ಪೂರೇಷನ್ ನೋಟಿಸ್ ನೀಡಿದೆ.

ನೋಟಿಸ್ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಹಿರಿಯ ನಟ ರಜಿನಿಕಾಂತ, ಕರೋನಾ ಹಾಗೂ ಲಾಕ್ ಡೌನ್ ನಿಂದಾಗಿ ಯಾವುದೇ ಆದಾಯವಿಲ್ಲ. ಲಾಕ್ ಡೌನ್ ಮೊದ್ಲು ಬುಕ್ ಮಾಡಿದ್ದ ಜನರಿಗೆ ಸರ್ಕಾರದ ಆದೇಶದಂತೆ ಹಣ ವಾಪಸ್ ಮಾಡಲಾಗಿದೆ. ಹೀಗಾಗಿ ತೆರಿಗೆ ಹಣ 6.50 ಲಕ್ಷ ಕಟ್ಟುವುದು ಕಷ್ಟವೆಂದು ಅರ್ಜಿಯಲ್ಲಿ ತಿಳಿಸಿದ್ರು.

ನೋಟಿಸ್ ಕೊಟ್ಟಿರುವ ಪಾಲಿಕೆಗೆ ಉತ್ತರಿಸುವ ಬದಲು, ನೋಟಿಸ್ ನೀಡಿದ 10 ದಿನದೊಳಗೆ ಕೋರ್ಟ್ ಗೆ ಬಂದಿದ್ದೀರಿ. ಕೋರ್ಟ್ ಸಮಯ ವ್ಯರ್ಥ ಮಾಡಿದ್ದಕ್ಕೆ ದಂಡ ಹಾಕಬೇಕಾಗುತ್ತೆ. ಅರ್ಜಿಯನ್ನ ವಾಪಸ್ ಪಡೆಯಿರಿ ಎಂದು ನ್ಯಾಯಮೂರ್ತಿ ಅನಿತಾ ಸುಮಂತ ತರಾಟೆಗೆ ತೆಗೆದುಕೊಂಡರು. ಇದ್ರಿಂದಾಗಿ ರಜಿನಿ ಪರ ವಕೀಲರು ಅರ್ಜಿಯನ್ನ ವಾಪಸ್ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!