ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ಸೇರಿದಂತೆ 9 ರಾಜ್ಯಗಳ 16 ಸ್ಥಾನಗಳ ರಾಜ್ಯಸಭೆ ಚುನಾವಣೆಗೆ ಕರ್ನಾಟಕದಿಂದ ನಟ ಹಾಗೂ ಬಿಜೆಪಿ ವಕ್ತಾರ ಜಗ್ಗೇಶ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಮರು ಆಯ್ಕೆ ಆಗುವುದು ಖಚಿತವಾಗಿದೆ. ನಟ ಜಗ್ಗೇಶ್ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗುವ ಸಾಧ್ಯತೆಯಿದೆ. ಎರಡು ಸ್ಥಾನಗಳಿಗೆ ಬಿಜೆಪಿ ಹಾಗೂ ಒಂದು ಸ್ಥಾನಕ್ಕೆ ಕಾಂಗ್ರೆಸ್ ಪಕ್ಕಾ ಆಗಿವೆ. ಇನ್ನೊಂದು ಸ್ಥಾನಕ್ಕಾಗಿ ಮೈತ್ರಿ ಮಾಡಿಕೊಳ್ಳಬೇಕಿದೆ. ಹೀಗಾಗಿ ಜೆಡಿಎಸ್ ಯಾರಿಗೆ ಸಾಥ್ ನೀಡುತ್ತೆ ಅಥವ ಜೆಡಿಎಸ್ ಗೆ ಯಾರು ಸಾಥ್ ನೀಡುತ್ತಾರೆ ಅನ್ನೋ ಕುತೂಹಲವಿದೆ.
ಬಿಜೆಪಿ ಸಹ ಮೂರನೇ ಅಭ್ಯರ್ಥಿಯಾಗಿ ಪ್ರಕಾಶ್ ಶೆಟ್ಟಿಯನ್ನು ಕಣಕ್ಕೆ ಇಳಿಸಲು ನೋಡುತ್ತಿದೆ. ಒಂದು ಸ್ಥಾನ ಗೆಲ್ಲಲು ಜೆಡಿಎಸ್ ಗೆ ಅಸಾಧ್ಯವಿದೆ. ಆದರೆ, 32 ಮತಗಳ ಹೊಂದಾಣಿಕೆಯ ಕಸರತ್ತು ನಡೆಸಬಹುದು.