ಎರಡು ವಿಚಾರಗಳಿಗೆ ಕ್ಷಮೆ ಕೇಳಿದ ಜಗ್ಗೇಶ್

145

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಎರಡು ಕಾರಣಗಳಿಗೆ ಜನರ ಬಳಿ ಕ್ಷಮೆ ಕೇಳಿದ್ದಾರೆ. ಇಂದು ಅವರ ಜನ್ಮದಿನ. ಹೀಗಾಗಿ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಪಡೆದಿದ್ದಾರೆ. ಅಲ್ಲಿಂದಲೇ ಫೇಸ್ ಬುಕ್ ಲೈವ್ ಬಂದು ಮಾತನಾಡಿದ್ದಾರೆ.

ನಾನು ನೇರ ನುಡಿಯ ಮನುಷ್ಯ. ಹಳ್ಳಿಸೊಗಡಿನಲ್ಲಿಯೇ ನನ್ನ ಮಾತುಗಳು ಇರುತ್ತವೆ. ಮೈಕ್ ಹಿಡಿದ ಭರದಲ್ಲಿ ಆಡಿದ ಮಾತುಗಳಿಗೆ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿಬಿಡಿ. ನಿಮ್ಮ ತಂದೆಯ ವಯಸ್ಸಿನವನು ಎಂದುಕೊಂಡು ಕ್ಷಮಿಸಿಬಿಡಿ ಎನ್ನುವ ಮೂಲಕ ಹುಲಿ ಉಗುರಿನ ವಿಚಾರವಾಗಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಗ್ಗೆ ಹೆಸರು ಹೇಳದೆ ಮಾತನಾಡಿದ್ದರು.

ಇನ್ನು ರಂಗನಾಯಕ ಚಿತ್ರದ ಬಗ್ಗೆ ಅಭಿಮಾನಿಗಳಿಂದ, ಪ್ರೇಕ್ಷಕರಿಂದ ಕೆಟ್ಟ ಅಭಿಪ್ರಾಯಗಳು ಬಂದಿವೆ. ಅದರ ಬಗ್ಗೆ ಮಾತನಾಡಿ, ಅದು ನನ್ನ ಸಿನಿಮಾ ಅಲ್ಲ. ನಿರ್ದೇಶಕನನ್ನು ನಂಬಿ ಕೆಲಸಕೊಟ್ಟೆ. ಆ ನಿರ್ದೇಶಕ ತನ್ನ ಆಸೆಗೆ ತಕ್ಕಂತೆ ಕೆಲಸ ನಿರ್ವಹಿಸಿದ್ದಾನೆ. ಆ ಸಿನಿಮಾದಿಂದ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!