ಢಾಕಾದಲ್ಲಿ ನಾಳೆ ಕಾಳಿ ಮಂದಿರ ಉದ್ಘಾಟನೆ

472

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಪುನರ್ ನಿರ್ಮಾಣಗೊಂಡಿರುವ ರಮನಾ ಕಾಳಿ ಮಂದಿರವನ್ನು ಶುಕ್ರವಾರ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟನೆ ಮಾಡಲಿದ್ದಾರೆ. ಈ ಮೂಲಕ ಎರಡು ದೇಶಗಳ ಪಾಲಿಗೆ ಭಾವನಾತ್ಮಕ ವಿಷಯವಾಗಿದೆ.

1971ರಲ್ಲಿ ಪಾಕಿಸ್ತಾನದ ಸೈನಿಕರ ಪಡೆ ಆಪರೇಷನ್ ಸರ್ಚ್ ಲೈಟ್ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಈ ದೇವಸ್ಥಾನವನ್ನು ಧ್ವಂಸಗೊಳಿಸಿದ್ದವು. ಅಲ್ದೇ, ಇಲ್ಲಿನ ಭಕ್ತರನ್ನು ಸಹ ಹತ್ಯೆ ಮಾಡಿದ್ದರು. ಪಾಕ್ ನಿಂದ ಬಾಂಗ್ಲಾ ಬಿಡುಗಡೆ ಹೊಂದಿದ ದಿನವನ್ನು ವಿಜಯ ದಿವಸ ಎಂದು ಆಚರಿಸಲಾಗುತ್ತಿದೆ. ಗುರುವಾರ ನಡೆದ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿ ಕೋವಿಂದ್ ಭಾಗವಹಿಸಿ ಗೌರವ ಸ್ವೀಕರಿಸಿದರು.




Leave a Reply

Your email address will not be published. Required fields are marked *

error: Content is protected !!