ಬಾಲಿವುಡ್ ಅಂಗಳದಲ್ಲಿ ಬಿಗ್ ಬಜೆಟ್ ಮೂವಿ ರೆಡಿಯಾಗ್ತಿದೆ. ರಾಮಾಯಣ ಕಥೆಯನ್ನ ಬಿಗ್ ಸ್ಕ್ರೀನ್ ಮೇಲೆ ತರಲು ದೊಡ್ಡ ತಯಾರಿ ನಡೆದಿದೆ. ಸ್ಟಾರ್ ನಟರ ಬಹುದೊಡ್ಡ ಟೀಂ ಇರುವ ಇದಕ್ಕೆ ಬರೋಬ್ಬರಿ 600 ಕೋಟಿ ರೂಪಾಯಿ ಬಜೆಟ್ ಎನ್ನಲಾಗ್ತಿದೆ.
ಇದೀಗ ಚಿತ್ರದ ಪ್ರಮುಖ ಪಾತ್ರ ಸೀತೆಯಾಗಿ ಯಾರನ್ನ ಮಾಡಬೇಕು ಅನ್ನೋ ಚರ್ಚೆ ನಡೆಯುತ್ತಿರುವಾಗ್ಲೇ, ನಟಿ ಶ್ರದ್ಧಾ ಕಪೂರ ಹೆಸರು ಕೇಳಿಬಂದಿದೆ. ನಿರ್ದೇಶಕ ನಿತೀಶ ತಿವಾರಿ ತಲೆಯಲ್ಲಿ ನಟಿ ಶ್ರದ್ಧಾ ಕಪೂರ್ ಇದ್ದು ಒಂದು ರೌಂಡ್ ಮಾತುಕತೆಯಾಗಿದೆಯಂತೆ. ಇದಕ್ಕೆ ನಟಿ ಒಪ್ಪಿಗೆ ಸಿಕ್ಕಿದೆ ಅಂತಾನೂ ಹೇಳಲಾಗ್ತಿದೆ. ಸಿನ್ಮಾ ಸೆಟ್ ಏರಿದ್ಮೇಲೆ ಎಲ್ಲದಕ್ಕೂ ಉತ್ತರ ಸಿಗಲಿದೆ.