ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ ಡೌನ್ ಸಂದರ್ಭದಲ್ಲಿ ಹಾಗೂ ಅದು ಮುಗಿದ್ಮೇಲೂ ಅಕ್ಕಿ ಕೊಡ್ತಿವೆ. ಇದ್ಯಾಕೆ ಹೀಗೆ ಮಾಡ್ತಿದ್ದಾರೆ ಅನ್ನೋದು ನನಗೆ ಅರ್ಥವಾಗುತ್ತಿಲ್ಲ. ಹರಾಮದ್ ತಿನ್ನುವ ವೃತ್ತಿಯನ್ನ ಕೇಂದ್ರ, ರಾಜ್ಯ ಸರ್ಕಾರಗಳು ಅತಿ ಹೆಚ್ಚು ಮಾಡ್ತಿವೆ ಎಂದು ಉದ್ಯಮಿ ವಿಜಯ ಸಂಕೇಶ್ವರ ಹೇಳುವ ಮೂಲಕ ಬಡವರ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತ್ನಾಡಿದ್ದಾರೆ.
ಕೆಲಸದವರೆಲ್ಲರೂ ಹೋಗಿ ಮನೆಯಲ್ಲಿ ಮಲ್ಕೊಂಡ್ರು. ಫೋನ್ ಮಾಡಿದ್ರೆ ದೀಪಾವಳಿ ತನಕ ಮೋದಿ ಅವರ ಅಕ್ಕಿ ಕೊಡ್ತೀನಿ ಅಂದಾರ. ಇದಾದ್ಮೇಲೆ ನೋಡೋಣ. ಅಲ್ಲಿ ತನಕ ಫೋನ್ ಮಾಡಬ್ಯಾಡ್ರಿ ಅಂತಾರ ಅಂತಾ ಹೇಳಿದ್ದಾರೆ. ಕರೋನಾ ಕಂಟ್ರೋಲ್ ಆಗಲು ಮೂಗಿನಲ್ಲಿ ಲಿಂಬೆಹಣ್ಣಿನ ರಸ ಹಾಕಿಕೊಳ್ಳಿ ಎಂದಿದ್ದ ಉದ್ಯಮಿ ಸಂಕೇಶ್ವರ, ಈಗ ಹರಾಮದ್ ಅಕ್ಕಿ ತಿನ್ನೋದು ಹೆಚ್ಚಾಗೈತಿ ಅನ್ನೋ ಮೂಲಕ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.