ರಥೋತ್ಸವದ ವೇಳೆ ಅನಾಹುತ: 10 ಮಂದಿ ಸಾವು

521

ಪ್ರಜಾಸ್ತ್ರ ಸುದ್ದಿ

ತಾಂಜಾವೂರ್: ಇಲ್ಲಿನ ಕಲಿಮೇಡು ಎಂಬಲ್ಲಿನ ದೇವಸ್ಥಾನದ ರಥೋತ್ಸವದ ವೇಳೆ ವಿದ್ಯುತ್ ಹರಿದು ಬೆಂಕಿ ಹೊತ್ತಿಕೊಂಡಿದೆ. ಇದರ ಪರಿಣಾಮ ಬರೋಬ್ಬರಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ರಥೋತ್ಸವದ ವೇಳೆ ವಿದ್ಯುತ್ ವೈರ್ ತಾಗಿದ ಪರಿಣಾಮ ಭೀಕರ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಸ್ಥಳದಲ್ಲೇ 10 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಾಂಜಾವೂರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!