ಪ್ರಜಾಸ್ತ್ರ ಸುದ್ದಿ
ನರಗುಂದ: ಮೂರು ಸಾವಿರ ಮಠದ ಪೀಠಾಧಿಪತಿಯಾಗಲು ದಿಂಗಾಲೇಶ್ವರ ಸ್ವಾಮೀಜಿ ರೌಡಿಸಂ ಮಾಡಿದ್ದಾರೆ ಎಂದು, ಸಚಿವ ಸಿ.ಸಿ ಪಾಟೀಲ ಇತ್ತೀಚೆಗೆ ಆರೋಪಿಸಿದ್ದರು. ಈ ಸಂಬಂಧ ಸಚಿವರ ಮನೆ ಮುಂದೆ ಇಂದು ಸ್ವಾಮೀಜಿ ಧರಣಿ ನಡೆಸಲು ಮುಂದಾಗಿದ್ದಾರೆ.
ನನ್ನ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತು ಮಾಡಬೇಕೆಂದು ಏಪ್ರಿಲ್ 27ರ ತನಕ ಗಡುವು ನೀಡಿದ್ದರು. ಅದು ಮುಗಿದ ಹಿನ್ನೆಲೆಯಲ್ಲಿ ನಗರದಲ್ಲಿರುವ ಸಚಿವರ ಮನೆ ಮುಂದೆ ದಿಂಗಾಲೇಶ್ವರ ಸ್ವಾಮೀಜಿ ಇಂದು ಧರಣಿ ನಡೆಸಲಿದ್ದಾರೆ.