ನಟ ರವಿಚಂದ್ರನ್ ಬರಿ ನಟನೆಯಿಂದ ಮಾತ್ರ ಗುರುತಿಸಿಕೊಂಡಿಲ್ಲ. ನಿರ್ದೇಶಕ, ನಿರ್ಮಾಪಕ, ಸಂಗೀತ ಸಂಯೋಜಕ, ಕಥೆ, ಚಿತ್ರಕಥೆ ಬರೆಯುವುದ್ರಿಂದ ಹಿಡಿದು ಬಣ್ಣದ ಬದುಕಿನಲ್ಲಿ ಎಲ್ಲವೂ ತಾವೆಯಾಗಿ ಸೈ ಎನಿಸಿಕೊಂಡವರು ಚಂದನವನದ ಕ್ರೇಜಿಸ್ಟಾರ್.
ಅಪೂರ್ವ ಸಿನ್ಮಾ ಸೋಲಿನ ಬಳಿಕ ನಿರ್ದೇಶನದಿಂದ ದೂರ ಉಳಿದು, ಬರೀ ನಟನೆಯಲ್ಲಿ ತೊಡಗಿಸಿಕೊಂಡಿದ್ರು. ಇತ್ತೀಚೆಗೆ ಬಿಡುಗಡೆಯಾಗಿರುವ ಕುರುಕ್ಷೇತ್ರ ಸಿನಿಮಾದಲ್ಲಿ ಕೃಷ್ಣನ ಪಾತ್ರ ಮಾಡಿದ್ದಾರೆ. ಇದೀಗ ರವಿಚಂದ್ರನ್ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟುಕೊಳ್ತಿದ್ದಾರೆ.
‘ರವಿ ಬೋಪಣ್ಣ’ ಸಿನ್ಮಾದ ಮೂಲಕ ಮತ್ತೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಇದರ ಜೊತೆಗೆ ಸಾಹಿತ್ಯ ಹಾಗೂ ಮೂರು ಹಾಡುಗಳನ್ನ ಇವರೆ ಬರೆಯುತ್ತಿದ್ದಾರೆ. ಈಗಾಗ್ಲೇ ‘ರವಿ’ ಟೈಟಲ್ ನಲ್ಲಿ ಸಿನ್ಮಾ ಮಾಡ್ತಿರುವ ರವಿಚಂದ್ರನ್ ಅವರ ಗಡ್ಡದ ಗೆಟಪ್ ನೋಡಿದ ನಿರ್ಮಾಪಕರು ನನ್ಗೊಂದು ಸಿನ್ಮಾ ಮಾಡಿಕೊಡಿ ಅಂದ್ರಂತೆ. ಅವರ ಮಾತಿಗೆ ಓಕೆ ಎಂದಿರುವ ನಟ ರವಿಚಂದ್ರನ್ ‘ರವಿ ಬೋಪಣ್ಣ’ ಚಿತ್ರವನ್ನ ಕೈಗೆತ್ತುಕೊಂಡಿದ್ದಾರೆ.
ಎರಡು ಶೇಡ್ ಗಳಲ್ಲಿ ನಟ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ. ಕಾವ್ಯ ಶೆಟ್ಟಿ ನಾಯಕಿಯಾಗಿದ್ದು, ಇನ್ನೊಬ್ಬಳು ನಾಯಕಿಯ ಹುಡುಕಾಟ ನಡೆದಿದೆ. ನಟ ಸುದೀಪ ಇದರಲ್ಲಿ ಲಾಯರ್ ಆಗಿ ಕಾಣಿಸಿಕೊಳ್ತಿದ್ದಾರೆ. 12 ವರ್ಷಗಳ ಬಳಿಕ ನಟ ಮೋಹನ, ರವಿಮಾಮನ ಕ್ಯಾಂಪ್ ಸೇರಿದ್ದಾರೆ.