ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕಳೆದ ಜನವರಿ 26ರಂದು ಮಂಡ್ಯ ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿತ್ತು. ಆದರೆ, ಇದೀಗ ಅವರನ್ನು ಅಲ್ಲಿಂದ ಕೈ ಬಿಡಲಾಗಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಮಂಡ್ಯ ಉಸ್ತುವಾರಿಯಿಂದ ಆರ್.ಅಶೋಕ್ ಅವರನ್ನು ಮುಕ್ತ ಮಾಡಲಾಗಿದೆ. ಅವರಿಗೆ ಬೇರೆ ಹಲವು ಕಾರ್ಯಕ್ರಮಗಳ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಿದರು. ಆದರೆ, ಆರ್.ಅಶೋಕ್ ಮಂಡ್ಯ ಉಸ್ತುವಾರಿ ದಿನದಿಂದಲೇ ಅವರ ವಿರುದ್ಧ ಅಭಿಯಾನಗಳು ನಡೆದಿವೆ. ಗೋ ಬ್ಯಾಕ್ ಪೋಸ್ಟರ್ ಅಭಿಯಾನ, ಪ್ರತಿಭಟನೆಗಳು ಸಹ ನಡೆದಿವೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದು, ಮಂಡ್ಯ ಉಸ್ತುವಾರಿಯಿಂದ ಆರ್.ಅಶೋಕ್ ಅವರನ್ನು ತೆಗೆಯುವಂತೆ ಕೇಳಲಾಗಿತ್ತು. ಈಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಮುಕ್ತಗೊಳಿಸಲಾಗಿದೆ.