ಪ್ರಜಾಸ್ತ್ರ ಸುದ್ದಿ
ಕೊಲ್ಲಂ: ಒಂದೊಳ್ಳೆ ಉದ್ಯೋಗ ಪಡೆದು ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದುಕೊಂಡಿದ್ದ ಯುವತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಕೊಲ್ಲಂನಲ್ಲಿ ನಡೆದಿದೆ. ಸಂದರ್ಶನಕ್ಕೆ ಹೊರಟಿದ್ದ ಅನ್ಸು(25) ಅನ್ನೋ ಯುವತಿ ಮೃತ ದುರ್ದೈವಿ.
ಕಾಸರಗೋಡು ಕೇಂದ್ರಿಯ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದ ಅನ್ಸು, ಕಾಲೇಜೊಂದರಲ್ಲಿ ಪ್ರಾಧ್ಯಾಪಕಿ ಹುದ್ದೆಯ ಸಂದರ್ಶನಕ್ಕೆ ಹೊರಟಿದ್ದಳು. ಟ್ರೆಸಾ ಆಂಟನಿ ಕೊಚ್ಚಿಯಲ್ಲಿ ಜಿಬ್ರಾ ಕ್ರಾಸಿಂಗ್ ಮಾಡುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾಳೆ.
ಅಪಘಾತ ಸಂಬಂಧ ಕಾರು ಚಾಲಕ ಪಥನಂತಿಟ್ಟ ನಿವಾಸಿ ಜಯಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಕಾರು ವಶಕ್ಕೆ ಪಡೆದಿದ್ದಾರೆ.