ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣವೆಂದು ಮರುನಾಮಕರಣ ಮಾಡಿ ಸಿಲಿಕಾನ್ ಸಿಟಿಗೆ ಸೇರಿಸುವ ಕುರಿತು ಹೇಳಿಕೆ ನೀಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕೆಂಡ ಕಾರುತ್ತಿದ್ದಾರೆ. ಇದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ರಾಮನಗರ ಜಿಲ್ಲೆ ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಿಸುವ ವಿಚಾರ ನನಗೆ ಗೊತ್ತಿಲ್ಲ. ಡಿ.ಕೆ ಶಿವಕುಮಾರ್ ಅವರನ್ನು ನಾನು ಭೇಟಿಯಾಗಿಲ್ಲ. ಹೆಸರು ಬದಲಾಯಿಸುವುದರಿಂದ ಸಮಸ್ಯೆಯಿಲ್ಲ. ಹೆಚ್ಚಿನ ಅನುದಾನ ಸಿಗಬೇಕು ಎಂದರು. ವರ್ಗಾವಣೆಯಲ್ಲಿ ಎಲ್ಲ ಸಚಿವರು ಹಣ ಪಡೀತಾರೆ. ತಗೊಂಡಿಲ್ಲವೆಂದು ಆಣೆ ಮಾಡಲಿ ಅನ್ನೋ ಹೆಚ್ಡಿಕೆ ಹೇಳಿಕೆಗೆ, ಅವರ ಸರ್ಕಾರ ಇದ್ದಾಗ ಏನು ಮಾಡಿದ್ದಾರೆ ಗೊತ್ತು. ಅವರ ಬಳಿ ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ಕೊಡಲಿ ಅಂತಾ ಹೇಳಿದರು.