ಬೆಳಗಾವಿ ನಮ್ಮದು ಎಂದು ಹೇಳಬೇಡಿ ಎನ್ನಲು ಅಮಿತ್ ಶಾ ಯಾರು?: ವಾಟಾಳ್ ನಾಗರಾಜ್

198

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿದ್ದಾರೆ. ಈ ವೇಳೆ ಬೆಳಗಾವಿ ನಮ್ಮದು ಎಂದು ಹೇಳಬೇಡಿ. ಸುಪ್ರೀಂ ಕೋರ್ಟ್ ತೀರ್ಪು ಬರಲಿ. 3 ಜನ ಮುಖ್ಯಮಂತ್ರಿ, ಓರ್ವ ಐಪಿಎಸ್ ಅಧಿಕಾರಿಯ ಸಮಿತಿ ರಚಿಸಬೇಕು ಎಂದಿದ್ದು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇದರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಬೆಳಗಾವಿ ನಮ್ಮದು ಎಂದು ಹೇಳಬೇಡಿ ಎಂದು ಹೇಳಲು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಯಾರು? ಇದು ಅಕ್ಷಮ್ಯ ಅಪರಾಧ. ಬೆಳಗಾವಿ, ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗ. ಮಹಾಜನ್ ವರದಿಯೇ ಅಂತಿಮ. ಬೆಳಗಾವಿ ವಿಚಾರದಲ್ಲಿ ಅಮಿತ್ ಶಾ ಹೇಳಿಕೆ ಅವಿವೇಕದ ಪರಮಾವಧಿ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೇಂದ್ರ ಗೃಹಮಂತ್ರಿ ಹೇಳಿಕೆ ಒಪ್ಪಿದರೆ ರಾಜ್ಯಕ್ಕೆ ಅಪಾಯ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!