ಚುನಾವಣೆ ದೃಷ್ಟಿಯಿಂದ ಗಡಿ ವಿವಾದ ಎಬ್ಬಿಸಿಲ್ಲ: ಸಿಎಂ ಬೊಮ್ಮಾಯಿ

163

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಚುನಾವಣೆ ದೃಷ್ಟಿಯಿಂದ ಗಡಿ ವಿವಾದ ಎಬ್ಬಿಸಿಲ್ಲ. ಕಾಂಗ್ರೆಸ್ ನಾಯಕರ ಹೇಳಿಕೆಯಲ್ಲಿ ಹುರುಳಿಲ್ಲ ಎಂದಿದ್ದಾರೆ.

ಭಾಷೆ, ನಲ, ಜಲ ವಿಷಯದಲ್ಲಿ ಸರ್ಕಾರ ಬದ್ಧವಾಗಿದೆ. ಮಹಾರಾಷ್ಟ್ರದಲ್ಲಿನ ಕನ್ನಡಿಗರ ರಕ್ಷಣೆಗೂ ಸರ್ಕಾರ ಸಿದ್ಧವಿದೆ. ಬರೀ ಮಹಾರಾಷ್ಟ್ರವಲ್ಲ, ಆಂಧ್ರ, ತಮಿಳುನಾಡೇ ಇರಲಿ ಕನ್ನಡಿಗರ ರಕ್ಷಣೆ ಜವಾಬ್ದಾರಿ ಸರ್ಕಾರದ್ದು ಎಂದರು.

ಬಹಳ ವರ್ಷಗಳಿಂದ ಗಡಿ ವಿವಾದ ಮಾಡಲಾಗುತ್ತಿದೆ. ಆದರೆ, ಸುಪ್ರೀಂ ಕೋರ್ಟ್ ನಲ್ಲಿ ಗೆಲುವು ನಮ್ಮದಾಗಲಿದೆ ಅನ್ನೋ ವಿಶ್ವಾಸವಿದೆ ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!