ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಹಿಂಡಲಾಗದಲ್ಲಿ ಶನಿವಾರ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆದಿದೆ. ಈ ವೇಳೆ ಮಾಜಿ ಶಾಸಕ ಸಂಜಯ್ ಪಾಟೀಲ, ಇಷ್ಟೊಂದು ಸಂಖ್ಯೆಯಲ್ಲಿ ಸೇರಿರುವ ಜನರನ್ನು ನೋಡಿ ಅಕ್ಕನಿಗೆ ನಿದ್ದೆ ಬರುವುದಿಲ್ಲ. ನಿದ್ದೆ ಬರಬೇಕಂದರೆ ಮಾತ್ರೆ ತಗೋಬೇಕು ಇಲ್ಲ ಒಂದು ಪೆಗ್ ಹೆಚ್ಚಿಗೆ ಕುಡಿಬೇಕು ಎಂದು ಅಗೌರವದಿಂದ ಮಾತನಾಡಿದ್ದಾರೆ. ಹೀಗಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಬರೀ ಬಾಯಿ ಮಾತಿನಲ್ಲಿ ರಾಮ ಮಂದಿರ, ಭೇಟಿ ಬಚಾವೋ ಭೇಟಿ ಪಡಾವೋ ಅಂದರೆ ಸಾಲದು. ಮಹಿಳೆಯರಿಗೆ ಗೌರವ ಕೊಡುವುದು ಹಿಂದೂ ಸಂಸ್ಕೃತಿ. ಆದರೆ, ಮಾಜಿ ಶಾಸಕ ಸಂಜಯ್ ಪಾಟೀಲ ರಾಜ್ಯದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಇದೆಲ್ಲ ಎದುರಿಸಬೇಕಾಗಿದೆ ಎಂದು ಸಚಿವೆ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಜಯ್ ಅವಮಾನಕರವಾಗಿ ಮಾತನಾಡುವಾಗ ವೇದಿಕೆ ಮೇಲಿದ್ದ ಜಗದೀಶ್ ಶೆಟ್ಟರ್, ಮಂಗಳಾ ಅಂಗಡಿ ನಕ್ಕಿದ್ದಾರೆ. ಇದು ಬಿಜೆಪಿ ಅಜೆಂಡಾ. ವೇದಿಕೆ ಮೇಲೆ ಅವರು ಇದನ್ನು ಖಂಡಿಸಿಲ್ಲ. ಮಹಿಳಾ ಕುಲಕ್ಕೆ ಬಿಜೆಪಿ ನೀಡುವ ಗೌರವ ಇದೇನಾ ಎಂದು ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ.