ಪ್ರಜಾಸ್ತ್ರ ಸುದ್ದಿ
ನವದೆಹಲಿ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆಗೊಳಿಸಿತು. ಸಂಕಲ್ಪ ಪತ್ರ ಅನ್ನೊ ಹೆಸರಿನೊಂದಿಗೆ ಪ್ರಣಾಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬಿಡೆಗಡೆಗೊಳಿಸಿದರು.
ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ದೇಶದ ಜನರಿಗೆ ಮುಂದಿನ ದಿನಗಳಲ್ಲಿ ಏನೆಲ್ಲ ಮಾಡುತ್ತೇವೆ ಎನ್ನುವ ಭರವಸೆಯ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು. ಈ ವೇಳೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ವಿತ್ ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದ್ದರು.
ಈ ವೇಳೆ ಮಾತನಾಡಿದ ಪ್ರಧಾನಿ, ಬಡವರ ಅಭಿವೃದ್ಧಿ ವಿಸ್ತರಣೆಗಾಗಿ ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆಗೊಳಿಸಿದೆ. ಮೋದಿ ಗ್ಯಾರೆಂಟಿ, ಮುಕ್ತ ಪಡಿತರ ಯೋಜನೆ ಮುಂಬರುವ ಐದು ವರ್ಷಗಳ ತನಕ ಜಾರಿಯಲ್ಲಿರುತ್ತೆ ಎಂದರು. ಬಡವರು ಊಟ ಮಾಡುವ ಆಹಾರ ಪೌಷ್ಠಿಕತೆಯಿಂದ ಕೂಡಿದೆ. ಇದು ಸಸ್ತಾ ಆಗಿರುತ್ತೆ. ಈ ಮೂಲಕ ಹೊಟ್ಟೆ, ಮನಸ್ಸು ತುಂಬುತ್ತೆ. ಜೇಬು ಸಹ ತುಂಬಿರುತ್ತೆ ಎಂದಿದ್ದಾರೆ.