ಅ.5 ಕೆಆರ್ ಎಸ್ ಜಾಥಾ: ವಾಟಾಳ್ ನಾಗರಾಜ್

180

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪ್ರತಿಭಟನಾ ಮೆರವಣಿಗೆ ತಡೆಯುವ ದೃಷ್ಟಿಯಿಂದ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿಗೆ ತರಲಾಗಿದೆ. ಕನ್ನಡಪರ ಹೋರಾಟಗಾರರಿಗೆ ನೋಟಿಸ್ ಜಾರಿ ಮಾಡಿರುವುದು ಸರಿಯಲ್ಲ. ಅಕ್ಟೋಬರ್ 5ರಂದು ಕೆಆರ್ ಎಸ್ ವರೆಗೂ ಜಾಥಾ ನಡೆಸುತ್ತೇವೆ ಎಂದು ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

ಬಂದ್ ಯಶಸ್ವಿಯಾಗಿದೆ. ಆದರೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಕೆಆರ್ ಎಸ್ ತನಕ ಮೆರವಣಿಗೆ ಜಾಥಾ ಮಾಡುತ್ತೇವೆ. ಆವತ್ತು 2 ಸಾವಿರ ನಾಲ್ಕು ಚಕ್ರದ ವಾಹನಗಳು, 20 ಸಾವಿರ ದ್ವಿಚಕ್ರ ವಾಹನಗಳು ಸಹಿತ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

15 ಸಾವಿರಕ್ಕೂ ಹೆಚ್ಚು ಹೋರಾಟ ಮಾಡಿದ್ದಾನೆ. ನಾಡು, ನುಡಿ, ಜಲಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದು, ಕನ್ನಡಪರ ಹೋರಾಟಗಾರರಿಗೆ ನೋಟಿಸ್ ಕೊಟ್ಟಿದ್ದು ಸರಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.




Leave a Reply

Your email address will not be published. Required fields are marked *

error: Content is protected !!