ಪ್ರಜಾಸ್ತ್ರ ಸುದ್ದಿ
ವಿಜಯಪುರ: ನಗರದ ಸೋಲಾಪುರ ರಸ್ತೆಯಲ್ಲಿ ಸೋಮವಾರ ಜೆಸಿಬಿಗಳು ಘರ್ಜಿಸಿವೆ. ಸೋಲಾಪುರ ರಸ್ತೆಯ ಉಮದಿ ಸೂಪರ್ ಮಾರ್ಕೆಟ್ ನಿಂದ ಬಂಜಾರ ಕ್ರಾಸ್ ವರೆಗೂ ಮೊದಲ ಹಂತದ ಮಾಸ್ಟರ್ ಪ್ಲಾನ್ ಕಾರ್ಯಾಚರಣೆ ನಡೆಯಿತು. ಹೀಗಾಗಿ ರಸ್ತೆ ಅತಿಕ್ರಮಣ ಮಾಡಿಕೊಂಡ ಕಟ್ಟಡಗಳನ್ನು ತೆರವುಗೊಳಿಸುವ ಕೆಲಸ ನಡೆದಿದೆ.
ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಸುಮಾರು 8 ಜೆಸಿಬಿಗಳು ತೆರವು ಕಾರ್ಯಾಚರಣೆ ನಡೆಸಿವೆ. ಮಾಜಿ ಶಾಸಕ ಉಸ್ತಾದ್ ಅವರ ಮನೆ ಕಂಪೌಂಡ್ ಸೇರಿದಂತೆ ಪ್ರತಿಷ್ಠಿತ ಹೋಟೆಲ್ ಗಳು ನೆಲಸಮವಾಗಿವೆ. ರಸ್ತೆ ಅಗಲೀಕರಣ, ಚರಂಡಿ ವ್ಯವಸ್ಥೆ, ಪುಟ್ ಪಾತ್ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ಅತಿಕ್ರಮಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವ ಕೆಲಸ ನಡೆದಿದೆ.