ಪ್ರಜಾಸ್ತ್ರ ಅಪರಾಧ ಸುದ್ದಿ
ಹುಬ್ಬಳ್ಳಿ: ಪ್ರಯಾಣಿಕರೊಬ್ಬರ ಜೊತೆ ಗಲಾಟೆ ಮಾಡಿ ಅವರ ಬಳಿಯಿದ್ದ 35 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿಯ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಕಡೆಗೂ ಯಶಸ್ವಿಯಾಗಿದ್ದಾರೆ.
ಮಂಟೂರ ಮಿಲ್ಲತ ನಗರದ ನಿವಾಸಿಯಾದ ದಾದಾಪೀರ ನದಾಫ, ಖಾಜಾ ದುಖಾನದಾರ, ಯಲ್ಲಾಪುರ ಓಣಿಯ ಇಸಾಕ ಅಹ್ಮದ ಹಾಗೂ ಮಹ್ಮದ ಆಸೀಫ ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆ ಹಿನ್ನೆಲೆ:
ಕಳೆದ 2019 ರಲ್ಲಿ ಹುಬ್ಬಳ್ಳಿಯ ದುರ್ಗದ ಬೈಲಿನ ಚಿನ್ನದ ಅಂಗಡಿಯಲ್ಲಿ ಅಹ್ಮದ ಮತ್ತು ಅಡಿಕೆ ವ್ಯಾಪಾರಸ್ಥ 35 ಲಕ್ಷ ರೂಪಾಯಿ ಹಣ ಪಡೆದು ತಮ್ಮ ಊರಿಗೆ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದನ್ನ ತಿಳಿದುಕೊಂಡಿದ್ದ ಆರೋಪಿಗಳು ಅವರನ್ನ ಹಿಂಬಾಲಿಸಿ ಬೈಪಾಸ್ ಬಳಿಯ ಟೋಲ್ ಪ್ಲಾಜಾ ಬಳಿಯಲ್ಲಿ ಜಗಳ ತೆಗೆದು, ಹಣದ ಬ್ಯಾಗ್ ದೋಚಿಕೊಂಡು ಹೋಗಿದ್ದರು.
ಈ ಸಂಬಂಧ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ವರ್ಷ ಹಿಂದೆ ನಡೆದ ಪ್ರಕರಣವನ್ನು ಬೇಧಿಸುವಲ್ಲಿ ಪಿಐ ಶಿವಾನಂದ ಕಮತಗಿ ನೇತೃತ್ವದಲ್ಲಿ ತಂಡ ಯಶಸ್ವಿಯಾಗಿದೆ.