ಕಾರು ಅಪಘಾತ: ರೈತ ಸಂಘ ರಾಜ್ಯ ಉಪಾಧ್ಯಕ್ಷ ಸೇರಿ ಇಬ್ಬರ ಸಾವು

271

ಪ್ರಜಾಸ್ತ್ರ ಸುದ್ದಿ

ಚಿಕ್ಕಮಗಳೂರು: ಕಾರು ಅಪಘಾತದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷರು ಸೇರಿ ಇಬ್ಬರು ಸಾವನ್ನಪ್ಪಿದ ಘಟನೆ ರಾಮನಹಳ್ಳಿ ನಡೆದಿದೆ. ರಾಜ್ಯ ಉಪಾಧ್ಯಕ್ಷ ರಾಮಸ್ವಾಮಿ(70) ಹಾಗೂ ಎಂ.ರಾಮು(55) ಮೃತ ದುರ್ದೈವಿಗಳು.

ನವಲಗುಂದದಿಂದ ಬೇಲೂರಿಗೆ ಮೂವರು ಕಾರಿನಲ್ಲಿ ಹೊರಟಿದ್ದರು. ಭರ್ಜರಿ ಮಳೆ ಸುರಿಯುತ್ತಿರುವುದ್ರಿಂದ ಕಾರು ನಿಯಂತ್ರಣಕ್ಕೆ ಸಿಗದೆ ಮರಕ್ಕೆ ಡಿಕ್ಕಿಯಾಗಿ ಈ ಅನಾಹುತ ಸಂಭವಿಸಿದೆ ಎನ್ನಲಾಗ್ತಿದೆ. ಇನ್ನೊಬ್ಬರಿಗೆ ಸ್ಥಿತಿ ಗಂಭೀರವಾಗಿದೆ.

ರಾಮಸ್ವಾಮಿ ಕನಕಪುರ ಮೂಲದವರಾಗಿದ್ದು, ಹಾಸನದ ಆಲೂರಿನ ಬೆಳ್ಳವಾರದಲ್ಲಿ ವಾಸವಾಗಿದ್ದರು. ಎಂ.ರಾಮು ಚನ್ನಪಟ್ಟಣದ ಮೊಗೇನಹಳ್ಳಿಯವರಾಗಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!