ಹುಬ್ಬಳ್ಳಿ: ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಕುಖ್ಯಾತ ರೌಡಿ, ತಾನೇ ಸೃಷ್ಟಿಸಿಕೊಂಡ ಅವಾಂತರದಿಂದ ಸಿಕ್ಕಿಬಿದ್ದಿದ್ದಾನೆ. ರೌಡಿ ಸಲೀಂ ಬಳ್ಳಾರಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಹುಬ್ಬಳ್ಳಿಯ ನೇಕಾರ ನಗರದ ಹೋಟೆಲ್ ವೊಂದರಲ್ಲಿ ರಾತ್ರಿಹೊತ್ತು ಊಟ ಕೇಳಿದ್ದಾನೆ. ಲಾಕ್ ಡೌನ್ ನಿಂದಾಗಿ ಊಟ ಇಲ್ಲವೆಂದು ಹೇಳಿದ್ದಾರೆ. ಮೊದಲೇ ಕುಡಿದು ನಶೆಯಲ್ಲಿದ್ದ ಈತ, ಅಂಗಡಿ ಮಾಲೀಕರಿಗೆ ಅಸೌಭ್ಯವಾಗಿ ಬೈದಿದ್ದಾನೆ. ಈತನ ಹುಚ್ಚಾಟಕ್ಕೆ ಅಂಗಡಿ ಮಾಲೀಕ ಹಾಗೂ ಸ್ಥಳೀಯರು ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸ್ರು ಆಸಾಮಿಯನ್ನ ನೋಡಿ ರೌಡಿ ಸಲೀಂ ಬಳ್ಳಾರಿಯೆಂದು ಗುರುತಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಬೇಕಾಗಿದ್ದು, ತಲೆಮರೆಸಿಕೊಂಡಿದ್ದನೆಂದು ತಿಳಿದು ಬಂದಿದೆ. ಇದೀಗ ಕಸಬಾಪೇಟೆ ಠಾಣೆ ಪೊಲೀಸ್ರು ಆರೋಪಿಯನ್ನ ಬಂಧಿಸಿದ್ದಾರೆ.