ಪ್ರಜಾಸ್ತ್ರ ಸುದ್ದಿ
ಮೀರತ್: ಉತ್ತರ ಪ್ರದೇಶದಲ್ಲಿ ಸಾಧುಗಳ ಹತ್ಯೆ ಮುಂದುವರೆದಿದೆ. ಇಂದು ಮತ್ತೊಬ್ಬ ಸಾಧುವಿನ ಹತ್ಯೆ ನಡೆದಿದೆ. ಕೇಸರಿ ಬಟ್ಟೆ, ತಿಲಕ ವಿಟ್ಟುಕೊಂಡಿದ್ದಕ್ಕೆ, ಅನ್ಯಕೋಮಿನ ವ್ಯಕ್ತಿಯಿಂದ ಕಾಂತಿ ಪ್ರಸಾದ ಅನ್ನೋ ಸಾಧುವಿನ ಹತ್ಯೆಯಾಗಿದೆ.
60 ವರ್ಷದ ಕೊಲೆಯಾದ ಕಾಂತಿ ಪ್ರಸಾದ ಇಲ್ಲಿನ ಶಿವ ದೇವಸ್ಥಾನದ ಅಧ್ಯಕ್ಷರಾಗಿದ್ದು, ಉಸ್ತುವಾರಿ ವಹಿಸಿಕೊಂಡಿದ್ರು. ಸಾಧುವಿನ ಬಟ್ಟೆ ಹಾಗೂ ತಿಲಕದ ಬಗ್ಗೆ ಅನಾಸ್ ಖುರೇಷಿ ಎಂಬಾತ ಸದಾ ಹಂಗಿಸ್ತಿದ್ದನಂತೆ. ಇಂದು ಸಹ ಅದೆ ರೀತಿ ಮಾಡಿದ್ದಾನೆ. ಹೀಗಾಗಿ ಕಾಂತಿ ಪ್ರಾಸದ ಅವರ ಮನೆಗೆ ಹೋಗಿದ್ದಾನೆ.
ಖುರೇಷಿ ಬಗ್ಗೆ ಮನೆಯವರಲ್ಲಿ ದೂರು ಹೇಳಲು ಹೋದ ಸಾಧುವಿಗೆ ಹಿಂಬದಿಯಿಂದ ಕಟ್ಟೆಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹೀಗಾಗಿ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಕಾಂತಿ ಪ್ರಸಾದ ಸಾವನ್ನಪ್ಪಿದ್ರಂತೆ. ವಿವಿಧ ಸೆಕ್ಷನ್ ಅಡಿಯಲ್ಲಿ ಖುರೇಷಿ ವಿರುದ್ಧ ದೂರು ದಾಖಲಾಗಿದೆ. ಸಾಧುವಿನ ಬಟ್ಟೆ ಹಾಗೂ ತಿಲಕದ ಬಗ್ಗೆ ಸದಾ ವ್ಯಂಗ್ಯವಾಡಿ ಜಗಳ ಮಾಡ್ತಿದ್ದ ಎಂದು ಸ್ಥಳೀಯರು ಹೇಳ್ತಿದ್ದಾರೆ.
ಫಾಲ್ಗರ್ ನಲ್ಲಿ ಮೂವರು ಸಾಧುಗಳ ಹತ್ಯೆ ನಡೆದಿತ್ತು. ಇದಾದ್ಮೇಲೆ ಮತ್ತೆ ದೇವಸ್ಥಾನವೊಂದರಲ್ಲಿ ಮಲಗಿದ್ದ ಸಾಧುವಿನ ಕೊಲೆ ಮಾಡಲಾಯ್ತು. ಈಗ ಮೀರತನಲ್ಲಿ ನಡೆದಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.