ಮಂಗಳೂರು: ವಿ.ಡಿ ಸಾವರ್ಕರ್ ಅವರಿಗೆ ಭಾರತ ರತ್ನ ಕೊಡುವ ಬದ್ಲು ನಾಥೋರಾಮ ಗೋಡ್ಸೆಗೆ ಭಾರತ ರತ್ನ ಕೊಡಲಿ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಯನ್ನ ತಿವಿದಿದ್ದಾರೆ.
ಮಹಾತ್ಮ ಗಾಂಧೀಜಿ ಅವರನ್ನ ಹತ್ಯೆ ಮಾಡಿದ ಗೋಡ್ಸೆಗೆ ಭಾರತ ರತ್ನ ಕೊಡಲಿ. ಇದು ಬಿಜೆಪಿ ಭಟ್ಟಂಗಿತನ ಎಂದು ಹೇಳಿದ್ದಾರೆ. ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಕೈವಾಡವಿದೆ. ಸಾಕ್ಷಿಯಿಲ್ಲದೆ ಅವ್ರು ಖುಲಾಸೆಯಾದ್ರು ಅಂತಾ ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ವಿವಾದದ ಕಿಡಿ ಹಚ್ಚಿದ್ದಾರೆ.
ಈ ಬಗ್ಗೆ ಮಾತ್ನಾಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ, ವಿ.ಡಿ ಸಾವರ್ಕರ್ ಅವರ ಬಗ್ಗೆ ಸಿದ್ದರಾಮಯ್ಯಗೆ ಗೊತ್ತಿಲ್ಲ. ಗಾಂಧಿ ಅವರು ಶಾಂತಿಯಿಂದ ಹೋರಾಟ ಮಾಡಿದ್ರು. ಸಾವರ್ಕರ್, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಅನೇಕರು ಕ್ರಾಂತಿಕಾರಿಗಳು. ಸ್ವಾತಂತ್ರ್ಯಕ್ಕಾಗಿ ಯಾರು ಹೋರಾಟ ಮಾಡಿದ್ದಾರೋ ಅವರಿಗೆ ನಾವು ಗೌರವಿಸುತ್ತೇವೆ ಅಂತಾ ಹೇಳಿದ್ರು.