‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ವಿನೂತನ ಕಾರ್ಯಕ್ರಮ

1231

ಬೆಂಗಳೂರು: ಕೆ.ಕೆ ಮೂವಿ ಮೇಕರ್ಸ್ ಬೆಂಗಳೂರು, ಇವರ ವತಿಯಿಂದ ಕನ್ನಡ ಶಾಲೆ ಉಳಿಸಿ ಬೆಳೆಸಿ ಅನ್ನೋ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ನಯನಾ ರಂಗಮಂದಿರದಲ್ಲಿ ಈ ಒಂದು ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಖ್ಯಾತನಾಮರು ಇದರಲ್ಲಿ ಭಾಗವಹಿಸ್ತಿದ್ದಾರೆ.

ಸರ್ಕಾರಿ ಕನ್ನಡ ಶಾಲೆಗೆ ಮಕ್ಕಳನ್ನು ಕಳುಹಿಸಿ ಅಂದ್ರೆ ಯಾವ ಹೆತ್ತವರು ಒಪ್ಪಿಕೊಳ್ತಿಲ್ಲ. ಕಾರಣ, ಸರ್ಕಾರ ನಮ್ಮ ಕನ್ನಡ ಶಾಲೆಗಳನ್ನ ಅಷ್ಟರ ಮಟ್ಟಿಗೆ ಹಾಳು ಮಾಡ್ತಿದೆ. ಇಂಗ್ಲಿಷ್ ಮೋಹ ಮಾತೃಭಾಷೆಯನ್ನ ಕೊಲ್ಲುವಂತೆ ಮಾಡ್ತಿದೆ. ಸರ್ಕಾರಿ ಶಾಲೆಯಲ್ಲಿ ನೌಕರಿ ಮಾಡುವ ಶಿಕ್ಷಕರು ಸಹ ತಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸ್ತಿದ್ದಾರೆ.

ಅಲ್ದೇ ಈ ಹಿಂದೆಯಿದ್ದ ಮೈತ್ರಿ ಸರ್ಕಾರದಿಂದ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಶುರು ಮಾಡುವ ಮೂಲಕ, ಸರ್ಕಾರದಿಂದಲೇ ಕನ್ನಡ ಶಾಲೆಗೆ ಕೊಡಲಿಪೆಟ್ಟು ಬಿದ್ದಂತಾಗಿದೆ ಎಂದು ಹಲವು ಸಾಹಿತಿಗಳು, ಕನ್ನಡಪರ ಸಂಘಟನೆಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೆ.ಕೆ ಮೂವಿ ಮೇಕರ್ಸ್, ಕನ್ನಡ ಶಾಲೆ ಉಳಿಸಿ ಬೆಳೆಸುವ ಅನ್ನೋ ಒಂದು ಜಾಗೃತಿಯ ಕಾರ್ಯಕ್ರಮ ಆಯೋಜಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!