ನಾಳೆಯಿಂದ ಶಾಲೆಗಳು ಪ್ರಾರಂಭ

215

ಪ್ರಜಾಸ್ತ್ರ ಸುದ್ದಿ

ಕೊಪ್ಪಳ: ಬೇಸಿಗೆ ರಜೆ ಮುಗಿದು ನಾಳೆಯಿಂದ ರಾಜ್ಯಾದ್ಯಂತ ಶಾಲೆಗಳು ಶುರುವಾಗುತ್ತಿವೆ. ಹೀಗಾಗಿ ಎಲ್ಲೆಡೆ ಸ್ವಚ್ಛತಾ ಕಾರ್ಯ ನಡೆದಿದೆ. ಅದೇ ರೀತಿಯ ಜಿಲ್ಲೆಯ ಮಂಗಳಾಪುರ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆ ನಡೆಸಿದ್ದಾರೆ.

ನಿಗಿದಿಗಿಂತ ಈ ಬಾರಿ ಸ್ವಲ್ಪ ಬೇಗ ಶಾಲೆಗಳು ಶುರುವಾಗುತ್ತಿವೆ. ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಹೀಗಾಗಿ ಶಿಕ್ಷಕರು, ಸಿಬ್ಬಂದಿ ಸೋಮವಾರದಿಂದ ಶಾಲೆಗೆ ಹಾಜರಾಗಬೇಕು.

ಮಂಗಳಾಪುರ ಶಾಲೆಯಲ್ಲಿ ನಡೆದಿರುವ ಸ್ವಚ್ಛತೆ

ಬೇಸಿಗೆ ಬಿಸಿಲಿನಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಕೆಲ ದಿನಗಳ ಕಾಲ ಮುಂದೂಡಬೇಕು ಎಂದು ಕೆಲವರು ಮನವಿ ಸಲ್ಲಿಸಿದ್ದರು. ಆದರೂ, ನಾಳೆಯಿಂದ ಶಾಲೆಗಳು ಪ್ರಾರಂಭವಾಗುತ್ತಿವೆ. ವಿದ್ಯಾರ್ಥಿಗಳ ಪ್ರಮಾಣ ಬಹುತೇಕ ಕಡಿಮೆ ಇರಲಿದೆ.




Leave a Reply

Your email address will not be published. Required fields are marked *

error: Content is protected !!