ಕರೋನಾ ವೈರಸ್ ವಿರುದ್ಧದ ಅಭಿಯಾನದಲ್ಲಿ ಸಿನಿಮಾ ಮಂದಿಯೂ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದಾರೆ. ಅದೇ ರೀತಿ ಇದೀಗ ಬಹುಭಾಷಾ ನಟ ಅರ್ಜುನ ಸರ್ಜಾ ಅವರು ಕರ್ನಾಟಕದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಡಾ.ರಾಜಕುಮಾರ, ಡಾ.ವಿಷ್ಣುವರ್ಧನ, ಡಾ.ಅಂಬರೀಶ, ಶಂಕರನಾಗ, ಶಿವಣ್ಣ, ಪುನೀತರಾಜಕುಮಾರ, ಉಪೇಂದ್ರ, ದರ್ಶನ, ಯಶ್, ಧ್ರುವಾ ಸರ್ಜಾ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮನೆಯಿಂದಲೇ 8ಕ್ಕೂ ಹೆಚ್ಚು ನಿಮಿಷದ ವಿಡಿಯೋ ಮಾಡಿರುವ ಸ್ಟಾರ್ ನಟ, ನಿರ್ದೇಶಕ, ನಿರ್ಮಾಪಕ ಅರ್ಜುನ ಸರ್ಜಾ ಅವರು, ಸಧ್ಯದ ಪರಿಸ್ಥಿತಿಯ ಗಂಭೀರತೆಯನ್ನ ಅರ್ಥ ಮಾಡಿಕೊಳ್ಳಿ, ಮನೆಯಲ್ಲಿಯೇ ಇರಿ ಎಂದಿದ್ದಾರೆ.